ಕುಟುಂಬದವರಿಗೆ ವಿಷವುಣಿಸಿ ಪ್ರಿಯಕರನೊಂದಿಗೆ ಪರಾರಿಯಾದ ಯುವತಿ
Team Udayavani, Sep 19, 2021, 5:01 PM IST
ಸೂರತ್ : ಬಾಯ್ ಫ್ರೆಂಡ್ ಜೊತೆ ಓಡಿ ಹೋಗಲು ಹೊಂಚು ಹಾಕಿದ ಯುವತಿಯೋರ್ವಳು ತನ್ನ ಕುಟುಂಬದವರಿಗೆ ವಿಷವುಣಿಸಿ ಆಪತ್ತಿಗೆ ಸಿಲುಕಿಸಿದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ಎಸ್ಎಸ್ಎಲ್ಸಿ ವರೆಗೆ ಓದಿರುವ 18 ವರ್ಷ ವಯಸ್ಸಿನ ಖುಷ್ಬು ತಾನು ವಾಸಿಸುತ್ತಿದ್ದ ಏರಿಯಾದ ಹುಡುಗ ಸಚಿನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಆತನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆಕೆಯ ಮನೆಯವರು ವಾಪಸ್ ಮನೆಗೆ ಕರೆದು ತಂದು ಬುದ್ಧಿವಾದ ಹೇಳಿದ್ದರು. ಹಾಗೂ ಸಚಿನ್ ಜೊತೆ ಸಂಪರ್ಕ ಕಡಿದುಕೊಳ್ಳುವಂತೆ ತಾಕಿತು ಮಾಡಿದ್ದರು.
ಖುಶ್ಬು ತನಗೆ 18 ವರ್ಷ ವಯಸ್ಸು ತುಂಬುವ ವರೆಗೆ ಮನೆಯಲ್ಲಿಯೇ ಇದ್ದಳು. ಇತ್ತೀಚಿಗೆ 18ನೇ ವರ್ಷಕ್ಕೆ ಕಾಲಿಟ್ಟು ಬರ್ತ್ಡೇ ಆಚರಿಸಿಕೊಂಡಿದ್ದಳು. ಹುಟ್ಟುಹಬ್ಬದ ಎರಡು ದಿನಗಳ ನಂತರ (ಸೆಪ್ಟೆಂಬರ್ 12) ಮನೆಯಿಂದ ಓಡಿ ಹೋಗಲು ಪ್ಲ್ಯಾನ್ ಮಾಡಿದ್ದಳು. ಅದಕ್ಕಾಗಿ ತಮ್ಮ ಮನೆಯವರಿಗೆ ಪ್ರಜ್ಞೆ ತಪ್ಪಿಸಲೆಂದು ಮೆಡಿಕಲ್ ಶಾಫ್ನಿಂದ ಕೆಲವೊಂದಿಷ್ಟು ಮಾತ್ರೆಗಳನ್ನು ತಂದು ಆಲೂ ಪರೋಟದಲ್ಲಿ ಬೆರೆಸಿದ್ದಳು. ಇದನ್ನು ಸೇವಿಸಿ ಆಕೆಯ ತಾಯಿ ಹಾಗೂ ಸಹೋದರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಸಚಿನ್ ಜೊತೆ ಪರಾರಿಯಾಗಿದ್ದಳು.
ಮರು ದಿನ ಮುಂಜಾನೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಹೆಂಡತಿ ಹಾಗೂ ಮಗನನ್ನು ಖುಶ್ಬು ತಂದೆ ( ಈತ ಪರೋಟ ಸೇವಿಸಿರಲಿಲ್ಲ) ಆಸ್ಪತ್ರೆಗೆ ದಾಖಲಿಸಿದ್ದರು. ಜೊತೆಗೆ ಮಗಳು ಕಾಣೆಯಾಗಿದ್ದನ್ನು ಗಮನಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟರಲ್ಲೆ ಖುಷ್ಬು ಕೂಡ ಮದುವೆಯಾಗಿ ಗಂಡನ ಜೊತೆ ಠಾಣೆಗೆ ಹಾಜರಾಗಿದ್ದಳು.
ಕುಟುಂಬದವರ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಖುಷ್ಬು ತಂದೆ ನೀಡಿದ ದೂರಿನ ಆಧಾರದ ಮೇಲೆ ಸದ್ಯ ಆಕೆ ಹಾಗೂ ಸಚಿನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್