Malaysia airport: ಮಗನ ಶವದೊಂದಿಗಿದ್ದ ಮಹಿಳೆಗೆ ಸುಶ್ಮಾ ನೆರವು
Team Udayavani, Jan 12, 2018, 12:24 PM IST
ಹೊಸದಿಲ್ಲಿ : ಆಸ್ಟ್ರೇಲಿಯದಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಠಾತ್ ನಿಧನ ಹೊಂದಿದ ತನ್ನ ಪುತ್ರನೊಂದಿಗೆ ಅಲ್ಲೇ ಬಾಕಿ ಉಳಿದ ಭಾರತೀಯ ಮಹಿಳೆಗೆ ತನ್ನ ಪುತ್ರನ ಶವವನ್ನು ಸ್ವದೇಶಕ್ಕೆ ತರುವಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅತ್ಯಂತ ಚುರುಕಿನಿಂದ ಸಕಾಲದಲ್ಲಿ ನೆರವಾಗಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.
ಮೃತ ವ್ಯಕ್ತಿಯ ಸ್ನೇಹಿತರೋರ್ವರು “ತನ್ನ ಪುತ್ರನ ಶವವೊಂದಿಗೆ ಸ್ವದೇಶಕ್ಕೆ ಬರುವ ಯಾವುದೇ ಉಪಾಯ ಕಾಣದೆ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಉಳಿದಿರುವ ಭಾರತೀಯ ಮಹಿಳೆಗೆ ದಯವಿಟ್ಟು ಕೂಡಲೇ ನೆರವಾಗಿ’ ಎಂದು ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಟ್ಟಿಟರ್ ಮೂಲಕ ಮನವಿ ಮಾಡಿಕೊಂಡಿದ್ದರು.
ಒಡನೆಯೇ ಕಾರ್ಯೋನ್ಮುಖರಾದ ಸುಶ್ಮಾ ಸ್ವರಾಜ್ ಕೌಲಾಲಂಪುರದಲ್ಲಿ ಉಳಿದಿದ್ದ ಭಾರತೀಯ ಮಹಿಳೆಗೆ ತನ್ನ ಪುತ್ರನ ಶವವನ್ನು ಭಾರತಕ್ಕೆ ತರುವಲು ನೆರವಾದರು.
ಕೌಲಾಲಂಪುರದಲ್ಲಿನ ಭಾರತೀಯ ಹೈಕಮಿಶನ್ ಮೂಲಕ ನೆರವಿನ ಭರವಸೆ ನೀಡಿದ ಸುಶ್ಮಾ, ಭಾರತ ಸರಕಾರದ ಖರ್ಚಿನಲ್ಲೇ ಮೃತ ವ್ಯಕ್ತಿಯ ದೇಹವನ್ನು ಭಾರತಕ್ಕೆ ತರಲಾಗುವುದು ಎಂದು ಹೇಳಿದರಲ್ಲದೆ ಮೃತರ ಕುಟುಂಬಕ್ಕೆ ತನ್ನ ಸಂತಾಪ, ಸಾಂತ್ವನ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
MUST WATCH
ಹೊಸ ಸೇರ್ಪಡೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ