ಅಡ್ವಾಣಿ ಹುಟ್ಟುಹಬ್ಬಕ್ಕೆ ಕೇಕ್ ತರುತ್ತಿದ್ದ ಸುಷ್ಮಾ ಸ್ವರಾಜ್!
Team Udayavani, Nov 8, 2019, 2:30 PM IST
ಹೊಸದಿಲ್ಲಿ: ತಮ್ಮ 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಗಣ್ಯಾತಿಗಣ್ಯರು ಶುಭಾಶಯವನ್ನು ಕೋರಿದ್ದಾರೆ. ಇಂದು ಹಲವು ಪಕ್ಷಗಳ ಗಣ್ಯರು ಹಿರಿಯ ರಾಜಕೀಯ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರತಿ ವರ್ಷ ತಮ್ಮ ರಾಜಕೀಯ ಶಿಷ್ಯರು ಗುರು ಅಡ್ವಾಣಿ ಅವರ ಮನೆಗೆ ಬಂದು ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಹಾಗೇ ಇಲ್ಲ. ತಮ್ಮ ಶಿಷ್ಯರನ್ನು ಅಡ್ವಾಣಿ ಅವರು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಅನಂತ್ ಕುಮಾರ್, ಅರುಣ್ ಜೇಟ್ಲಿ, ಸುಷ್ಮಾ ಸ್ವಾರಾಜ್ ಮೊದಲಾದ ಅಡ್ವಾಣಿ ಪರವಾಗಿ ಗುರುತಿಸಿಕೊಂಡಿದ್ದ ಮುತ್ಸದ್ದಿ ನಾಯಕರು ದಿನಬೆಳಗಾಗುತ್ತಿದ್ದಂತೆ ಅಡ್ವಾಣಿ ಮನೆಯಲ್ಲಿರುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಹಾಗೆ ಉಳಿದಿಲ್ಲ. ಅನಂತ್ ಕುಮಾರ್, ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಅವರು ಈಗ ಇಲ್ಲ. ತಮ್ಮ ಪ್ರಿಯ ಶಿಷ್ಯರ ಅನುಪಸ್ಥಿತಿಯಲ್ಲಿ ಅಡ್ವಾಣಿ ಅವರು ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಅನಂತ್ ಕುಮಾರ್ ಅವರು ಇಲ್ಲದ ಎರಡನೇ ಹುಟ್ಟು ಹಬ್ಬವಾದರೂ, ಜೇಟ್ಲಿ ಮತ್ತು ಸುಷ್ಮಾ ಇಲ್ಲದ ಮೊದಲ ಹುಟ್ಟುಹಬ್ಬವಾಗಿದೆ.
ಕೇಕ್ ತರುತ್ತಿದ್ದ ಸುಷ್ಮಾ
ಅಡ್ವಾಣಿ ಅವರೊಂದಿಗೆ ದೀರ್ಘ ಸಮಯ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದವರು ಸುಷ್ಮಾ ಸ್ವರಾಜ್ . ತಮ್ಮ ರಾಜಕೀಯ ಗುರುವಿನ ಸ್ಥಾನವನ್ನು ಅಡ್ವಾಣಿ ಅವರಿಗೆ ಸುಷ್ಮಾ ನೀಡಿದ್ದರು. ಈ ಸಲುವಾಗಿ ಪ್ರತಿ ವರ್ಷ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಸುಷ್ಮಾ ಅವರು ಚಾಕಲೇಟ್ ಕೇಕ್ ಜತೆ ಆಗಮಿಸುತ್ತಿದ್ದರು. ಅಡ್ವಾಣಿ ಅವರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಅಚ್ಚುಮೆಚ್ಚು. ಅದನ್ನು ತಂದು ಸುಷ್ಮಾ ಅವರು ಅಡ್ವಾಣಿ ಜತೆ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ ಸುಷ್ಮಾ ಅವರು ಈಗ ನಮ್ಮ ನಡುವೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ