ಸುಷ್ಮಾ ನೆನ‌ಪು


Team Udayavani, Aug 8, 2019, 5:06 AM IST

p-39

ಚಾಕೊಲೇಟ್‌ ಕೇಕ್‌ ತರುತ್ತಿದ್ದರು
ಪ್ರತಿ ವರ್ಷ ನನ್ನ ಹುಟ್ಟಿದ ಹಬ್ಬಕ್ಕೆ ತಪ್ಪದೆ ಇಷ್ಟದ ಚಾಕೊಲೇಟ್‌ ಕೇಕ್‌ ಅನ್ನು ತರುತ್ತಿದ್ದರು ಎಂದು 91 ವಯಸ್ಸಿನ ಬಿಜೆಪಿ ಹಿರಿಯ ನಾಯಕ
ಎಲ್‌. ಕೆ. ಆಡ್ವಾಣಿ ನೆನಪಿಸಿ ಕೊಂಡಿದ್ದಾರೆ. ಮಹಿಳೆಯರಿಗೆ ಅವರು ಮಾದರಿಯಾಗಿದ್ದರು.ಅತ್ಯಂತ ಉತ್ತಮ ವಾಗ್ಮಿ. ಯಾವುದೋ ಘಟನೆಗಳನ್ನು ಅತ್ಯಂತ ಸ್ಪಷ್ಟವಾಗಿ ನೆನಪಿಟ್ಟುಕೊಂಡು ಅದನ್ನು ಅವರು ನಿಖರವಾಗಿ ವಿವರಿಸುತ್ತಿದ್ದ ಪರಿ ನನಗೆ ಅಚ್ಚರಿ ಎಂದು ಹೇಳಿದ್ದಾರೆ. ಸುಷ್ಮಾ ಸ್ವರಾಜ್‌ ದರ್ಶನಕ್ಕೆ ಬಂದಿದ್ದ ಆಡ್ವಾಣಿ ಗದ್ಗದಿತರಾರದು. ಅವರ ಪುತ್ರಿ ಪ್ರತಿಭಾ ಆಡ್ವಾಣಿ ದುಃಖ ತಾಳಲಾರದೆ ಸುಷ್ಮಾ ಪುತ್ರಿ ಬಾನ್ಸುರಿಯನ್ನು ತಬ್ಬಿಕೊಂಡು ಅತ್ತರು.

ಇದೇ ವೇಳೆ ಕಿರುತೆರೆ ನಟ ಕರಣ್‌ವೀರ್‌ ಬೊಹ್ರಾ ನಾನು ರಷ್ಯಾಕ್ಕೆ ತೆರಳಿದ್ದಾಗ, ಅಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿ, ನನ್ನ ಪಾಸ್‌ಪೋರ್ಟ್‌ ಕೊಂಚ ಮುಕ್ಕಾಗಿದ್ದನ್ನು ಪ್ರಶ್ನಿಸಿ ಪ್ರಯಾಣಕ್ಕೆ ತಡೆ ಯೊಡ್ಡಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅಗತ್ಯ ನೆರವು ನೀಡಿದ್ದರು ಎಂದು ನೆನೆಸಿಕೊಂಡಿದ್ದಾರೆ.

ತಾಯಿಯನ್ನು ಕಳೆದುಕೊಂಡಿದ್ದೇನೆ

“ನಾನಿಂದು ನನ್ನ ಮಾತೃಸ್ವರೂಪದ ಪೋಷಕರೊಬ್ಬರನ್ನು ಕಳೆದುಕೊಂಡಿದ್ದೇನೆ’. ವರ್ಷಗಳ ಹಿಂದೆ ಅಕಸ್ಮಾತ್ತಾಗಿ ಗಡಿ ದಾಟಿ ಪಾಕಿಸ್ಥಾನಕ್ಕೆ ತೆರಳಿ, 12 ವರ್ಷಗಳ ಕಾಲ ಅಲ್ಲೇ ಅನಾಥಾಲಯದಲ್ಲಿ ಬದುಕು ಸಾಗಿಸುತ್ತಿದ್ದ ಮೂಗ-ಕಿವುಡ ಯುವತಿ ಗೀತಾ, ಸುಷ್ಮಾ ಬಗ್ಗೆ ಹೇಳಿದ ಮಾತಿದು. ಪಾಕ್‌ನಲ್ಲಿದ್ದ ಆಕೆಯನ್ನು ಭಾರತಕ್ಕೆ ಮರಳಿ ತರಲು ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾಜೀ ತೀವ್ರ ಕಾಳಜಿ ವಹಿಸಿ ಯಶಸ್ವಿಯಾಗಿದ್ದರು. ಅದರ ಫ‌ಲವಾಗಿ, ಆಕೆಯೀಗ ಇಂದೋರ್‌ನ ಎನ್‌ಜಿಒದ ಮೂಗ-ಕಿವುಡರ ಶಾಲೆಯಲ್ಲಿ ಓದುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಜನ್ಮದಲ್ಲಿ ನೆನಪಿಡಬೇಕಾದ ಸಹಾಯ ಮಾಡಿರುವ ಅವರ ಅಗಲಿಕೆಗೆ ಗೀತಾ ಕಂಬನಿ ಮಿಡಿದಿದ್ದಾಳೆ.

“ನಾನಿಂದು ನನ್ನ ಮಾತೃಸ್ವರೂಪದ ಪೋಷಕರೊಬ್ಬರನ್ನು ಕಳೆದುಕೊಂಡಿದ್ದೇನೆ’. ವರ್ಷಗಳ ಹಿಂದೆ ಅಕಸ್ಮಾತ್ತಾಗಿ ಗಡಿ ದಾಟಿ ಪಾಕಿಸ್ಥಾನಕ್ಕೆ ತೆರಳಿ, 12 ವರ್ಷಗಳ ಕಾಲ ಅಲ್ಲೇ ಅನಾಥಾಲಯದಲ್ಲಿ ಬದುಕು ಸಾಗಿಸುತ್ತಿದ್ದ ಮೂಗ-ಕಿವುಡ ಯುವತಿ ಗೀತಾ, ಸುಷ್ಮಾ ಬಗ್ಗೆ ಹೇಳಿದ ಮಾತಿದು. ಪಾಕ್‌ನಲ್ಲಿದ್ದ ಆಕೆಯನ್ನು ಭಾರತಕ್ಕೆ ಮರಳಿ ತರಲು ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾಜೀ ತೀವ್ರ ಕಾಳಜಿ ವಹಿಸಿ ಯಶಸ್ವಿಯಾಗಿದ್ದರು. ಅದರ ಫ‌ಲವಾಗಿ, ಆಕೆಯೀಗ ಇಂದೋರ್‌ನ ಎನ್‌ಜಿಒದ ಮೂಗ-ಕಿವುಡರ ಶಾಲೆಯಲ್ಲಿ ಓದುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಜನ್ಮದಲ್ಲಿ ನೆನಪಿಡಬೇಕಾದ ಸಹಾಯ ಮಾಡಿರುವ ಅವರ ಅಗಲಿಕೆಗೆ ಗೀತಾ ಕಂಬನಿ ಮಿಡಿದಿದ್ದಾಳೆ.

ಕಂಬನಿ ಮಿಡಿದ ಬಾಣಸಿಗ ಖನ್ನಾ!

“ವಿಶ್ವವನ್ನೇ ಗೆದ್ದು ಬಾ ಮಗನೇ’ ಎಂದು ಸದಾ ಹರಸುತ್ತಿದ್ದ ಸುಷ್ಮಾ ಅಮ್ಮ ಇನ್ನೆಲ್ಲಿ? ಇದು ನ್ಯೂಯಾರ್ಕ್‌ನಲ್ಲಿರುವ ಬಾಣಸಿಗ ವಿಕಾಸ್‌ ಖನ್ನಾರ ಹೃದಯದಾಳದ ಕೂಗು. ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಗ್ಗೆ ಅವರು ಟ್ವೀಟರ್‌ನಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ಸ್ವರಾಜ್‌, ಯಾವಾಗ ನ್ಯೂಯಾರ್ಕ್‌ಗೆ ಬಂದರೂ, ಅವರಿಗಿಷ್ಟವಾದ ಅಡುಗೆಗಳನ್ನು ರುಚಿಕಟ್ಟಾಗಿ ಮಾಡಿ ಬಡಿಸುತ್ತಿದ್ದ ಖನ್ನಾ ಈಗ ತಾಯಿಯನ್ನು ಕಳೆದುಕೊಂಡ ವೇದನೆಯಲ್ಲಿ ಅದೆಲ್ಲವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಅಡುಗೆ ಮಾಡಿ ಬಡಿಸುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್‌ ಅಮ್ಮ’ ಎಂದಿದ್ದಾರೆ. ಅವರ ಟ್ವೀಟ್‌, 9,500 ಲೈಕ್‌ ಮತ್ತು 1300ಕ್ಕಿಂತ ಹೆಚ್ಚು ರೀಟ್ವೀಟ್‌ಗೆ ಒಳಗಾಗಿದೆ.

ಪ್ರಧಾನಿಯಾಗಲಿ ಎಂದಿದ್ದ ಠಾಕ್ರೆ

“ಸುಷ್ಮಾ ಸ್ವರಾಜ್‌ ಪ್ರಧಾನಿಯಾಗಬೇಕೆಂದು ತಂದೆ ಬಾಳಾ ಸಾಹೇಬ್‌ ಠಾಕ್ರೆ ಬಯಸಿದ್ದರು’. ಹೀಗೆಂದು ಹೇಳಿದ್ದು ಶಿವಸೇನೆಯ ನಾಯಕ ಉದ್ಧವ್‌ ಠಾಕ್ರೆ. ಸುಷ್ಮಾ ನಿಧನಕ್ಕೆ ಪ್ರತಿಕ್ರಿಯಿಸಿರುವ ಅವರು, “ವೈಚಾರಿಕ ಭೇದವಿದ್ದರೂ ರಾಜಕೀಯ ನೇತಾರರಲ್ಲಿ ಸ್ನೇಹಮಯ ವಾತಾವರಣ ಇರುತ್ತಿದ್ದ ಕಾಲಘಟ್ಟ ಸುಷ್ಮಾಜೀ ಸಾವಿನೊಂದಿಗೆ ಮುಗಿಯಿತು ಎನಿಸುತ್ತಿದೆ ಎಂದಿರುವ ಅವರು, ನಮ್ಮ ತಂದೆ (ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ) ಹಾಗೂ ಸುಷ್ಮಾ ನಡುವೆ ಆತ್ಮೀಯತೆಯಿತ್ತು. ಸುಷ್ಮಾಜೀಯಲ್ಲಿದ್ದ ವಾಕ್‌ ಚಾತುರ್ಯ, ರಾಜತಾಂತ್ರಿಕ ಗುಣಗಳನ್ನು ಗ್ರಹಿಸಿದ್ದ ತಂದೆ ಸುಷ್ಮಾ ಅವರು ಪ್ರಧಾನಿಯಾಗಲಿ ಎಂದು ಆಶಿಸಿದ್ದರು’ ಎಂದಿದ್ದಾರೆ.

ಪಾರ್ಟಿ ಕೊಡದೆ ಹೋದಿರಿ

“ಸುಷ್ಮಾ ದೀದಿ, ನೀವು ನಿಮ್ಮ ಪುತ್ರಿ ಬಾನ್ಸುರಿಯನ್ನು ಹಾಗೂ ನನ್ನನ್ನು ಒಂದೊಳ್ಳೆ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿದ್ದಿರಿ. ಆ ಆಶ್ವಾಸನೆ ಪೂರ್ಣಗೊಳಿಸದೇ ತೆರಳಿದ್ದೀರಿ’ ಎಂದು ಸಚಿವೆ ಸ್ಮತಿ ಇರಾನಿ ಟ್ವೀಟ್‌ ಮಾಡಿದ್ದಾರೆ. ಈ ಮನಮುಟ್ಟುವ ಟ್ವೀಟ್‌ ವೈರಲ್‌ ಆಗಿದೆ. ಮತ್ತೂಂದು ಟ್ವೀಟ್‌ನಲ್ಲಿ, “ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುವುದೇ ನಾವು ಅವರಿಗೆ ತೋರಬಹುದಾದ ನೈಜ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ.

ಪಾಕ್‌ ಯುವತಿಗೆ ವೈದ್ಯ ಸೀಟು

ಸುಷ್ಮಾ ಸ್ವರಾಜ್‌ ಪಾಕಿಸ್ಥಾನ ಮೂಲದ ಹಿಂದೂ ಯುವತಿಗೆ ವಿರೋಧಗಳ ಮಧ್ಯೆಯೂ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕೊಡಿಸಿದ್ದರು. ಜೈಪುರದಲ್ಲಿ ವಾಸವಿದ್ದ ಅವರು ನೀಟ್‌ ಬರೆಯಲು ಇಚ್ಛೆಪಟ್ಟಿ ದ್ದರು. ನನಗೆ ಅದೃಷ್ಟವಿದ್ದರೆ ವೈದ್ಯಕೀಯ ಸೀಟು ಪಡೆಯುತ್ತೇನೆ ಎಂದು ಕೋರಿದ್ದರು. ವಿದೇಶಿ ಪ್ರಜೆಯಾದ ಕಾರಣ ಅದಕ್ಕೆ ಅವಕಾಶ ಇರಲಿಲ್ಲ. ಅವರ ಮನವಿ ಸ್ವೀಕರಿಸಿದ್ದ ಸುಷ್ಮಾ ಸ್ವಂತ ಹೊಣೆಯಿಂದ ಜೈಪುರದ ಎಸ್‌ಎಂಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸಿ ದ್ದರು. ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಅವರು ಲೆಕ್ಕಿಸಲಿಲ್ಲ.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್‌ನ ಮಂತ್ರ: ಮೋದಿ

ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್‌ನ ಮಂತ್ರ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.