ಜಮ್ಮು – ಪೂಂಚ್ ರಾ. ಹೆದ್ದಾರಿಯಲ್ಲಿ ಐಇಡಿ ಪತ್ತೆ, ತಪ್ಪಿದ ಭಾರೀ ದುರಂತ
Team Udayavani, May 27, 2019, 12:44 PM IST
ಜಮ್ಮು : ಜಮ್ಮು – ಪೂಂಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡಲಾಗಿದ್ದ ಸುಧಾರಿತ ಸ್ಫೋಟಕವನ್ನು (ಐಇಡಿ) ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದ್ದು ಆ ಮೂಲಕ ಇಂದು ಸೋಮವಾರ ಭಾರೀ ದೊಡ್ಡ ಅನಾಹುತ ಸಂಭವಿಸುವುದನ್ನು ತಪ್ಪಿಸಲಾಗಿದೆ ಎಂದು ಅಧಿಕಾಗಳು ತಿಳಿಸಿದ್ದಾರೆ.
ಶಂಕಿತ ಐಇಡಿ ಸ್ಫೋಟಕ ಪತ್ತೆಯಾಗುತ್ತಲೇ ಜಮ್ಮು – ಪೂಂಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ತಾಸು ಕಾಲ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.
ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಕಲ್ಲಾರ್ ಚೌಕ್ ಸಮೀಪ ರಸ್ತೆ ಬದಿಯಲ್ಲಿ ಗಟ್ಟಿ ವಸ್ತುಗಳಿದ್ದ ಒಂದು ಪಾಲಿ ಬ್ಯಾಗ್ಮತ್ತು ದ್ರಾವಣ ತುಂಬಿದ್ದ ಒಂದು ಬಾಟಲಿ ಪತ್ತೆಯಾಯಿತು ಎಂದು ರಾಜೋರಿ ಎಸ್ಎಸ್ಪಿ ಯೋಗಾಲ್ ಮನ್ಹಾಸ್ ತಿಳಿಸಿದರು.
ಬೆಳಗ್ಗೆ 7.30ರ ಸುಮಾರಿಗೆ ಇದನ್ನು ಗಮನಿಸಿದ ಸೇನಾ ಘಟಕ ತತ್ಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿಕೊಂಡಿತು. ಆ ಬಳಿಕ ಕೂಡಲೇ ಸ್ಫೋಟಕವನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಯಿತು.
ಸೇನೆ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ ಒಡನೆಯೇ ಚಿಂಗೂಸ್ ಛತ್ಯಾರಿ ಪೊಲೀಸ್ ಪೋಸ್ಟ್ ಪ್ರಭಾರಿ ಮತ್ತು ಎಸ್ ಐ ಎಂ ಡಿ ಖಾನ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಬಂತು. ಅದಾಗಿ 10 ಗಂಟೆಯ ಸಮಾರಿಗೆ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ದೇಶ ವಿರೋಧಿ ಶಕ್ತಿಗಳು ಈ ಐಇಡಿಯನ್ನು ಇಟ್ಟಿರಬೇಕೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ