ಪುಣೆಯಲ್ಲಿ ರಸ್ತೆ ಬದಿ ಹೊಟೇಲಿಗೆ ಎಸ್ಯುವಿ ಢಿಕ್ಕಿ: ಮಾಲಕನ ಸಾವು
Team Udayavani, May 1, 2018, 4:23 PM IST
ಪುಣೆ : ಪುಣೆಯ ಸಾಂಗ್ವಿ ಪ್ರದೇಶದಲ್ಲಿ ಇಂದು ಮಂಗಳವಾರ ಅತ್ಯಂತ ವೇಗದಿಂದ ಧಾವಿಸಿ ಬಂದ ಎಸ್ಯುವಿ ವಾಹನವೊಂದು ನೇರವಾಗಿ ರಸ್ತೆ ಬದಿಯ ಹೊಟೇಲ್ ಗೆ ಢಿಕ್ಕಿ ಹೊಡೆದು 60 ವರ್ಷ ಪ್ರಾಯದ ಹೊಟೇಲ್ ಮಾಲಕನನ್ನು ಬಲಿತೆಗೆದುಕೊಂಡ ಘಟನೆ ವರದಿಯಾಗಿದೆ. ಮೃತ ಹೊಟೇಲ್ ಮಾಲಕ ಓಂ ಪ್ರಕಾಶ್ ಪಂದಿನ್ವಾರ್ ಎಂದು ಗೊತ್ತಾಗಿದೆ.
ಮೃತ ಪಂದಿನ್ವಾರ್ ಅವರ ಪತ್ನಿ, ಢಿಕ್ಕಿ ಹೊಡೆದ ವಾಹನ ಚಾಲಕ ಮತ್ತು ಇನ್ನೊಬ್ಬರು – ಒಟ್ಟು ಮೂವರು – ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಈ ಅವಘಡ ಸಂಭವಿಸಿದೆ.
ವೇಗವಾಗಿ ಧಾವಿಸಿ ಬರುತ್ತಿದ್ದ ಎಸ್ಯುವಿ ಚಾಲಕನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿರುವುದು ಸಿಸಿಟಿವಿ ಯಲ್ಲಿ ದಾಖಲಾಗಿದೆ. ವಾಹನದ ಚಾಲಕ ಮತ್ತು ಮಾಲಕನ ಗುರುತು ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?