ಬೋಗಿಗಳಲ್ಲಿ ಸ್ವತ್ಛ ಭಾರತ ಚಿಹ್ನೆ
Team Udayavani, Aug 27, 2018, 10:54 AM IST
ಹೊಸದಿಲ್ಲಿ: ಇದೇ ಅ.2ರಿಂದ ಮುಂದಿನ ವರ್ಷ ಅಕ್ಟೋಬರ್ 2ರವರೆಗೆ ನಡೆಯಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮಶತಾಬ್ದಿವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತೀಯ ರೈಲ್ವೇ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೈಲ್ವೇ ಬೋಗಿಗಳ ಮೇಲೆ ಸ್ವತ್ಛ ಭಾರತ ಅಭಿಯಾನದ ಚಿಹ್ನೆ ಹಾಗೂ ರಾಷ್ಟ್ರಧ್ವಜದ ಚಿತ್ರಗಳನ್ನು ಅಂಟಿಸಲಾಗುತ್ತದೆ.
ಬೆಂಗಳೂರಿನ ರೈಲು ನಿಲ್ದಾಣ ಸೇರಿದಂತೆ, ಗಾಂಧೀಜಿ ಭೇಟಿ ನೀಡಿದ್ದ ಅಥವಾ ಅವರ ಜೀವನಕ್ಕೆ ನಂಟು ಹೊಂದಿ ರುವ 43 ನಿಲ್ದಾಣಗಳನ್ನು ಗುರುತು ಮಾಡಲಾಗಿದ್ದು, ಇವುಗಳಿಗೆ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡ ಲಾಗುತ್ತದೆ.
ಇದಲ್ಲದೆ, ಎಲ್ಲಾ ನಿಲ್ದಾಣಗಳಲ್ಲಿ ಗಾಂಧಿಯ ಅಹಿಂಸೆ, ಐಕ್ಯತೆ, ಶುಚಿತ್ವ, ಸ್ವಯಂ ಸೇವೆ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ ಸಿದ್ಧಾಂತಗಳನ್ನು ಸಾರುವ ಸಂದೇಶಗಳು, ಚಿತ್ರಗಳನ್ನು ಬಿಡಿಸಲು, ರೈಲ್ವೇ ಮಾರ್ಗಗಳ ಎರಡೂ ಬದಿಯಲ್ಲಿ ಗಿಡಗಳನ್ನು ನೆಡಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು