ಆರ್ಯ ಮೂಲದ ಬಗ್ಗೆ ಮತ್ತೆ ಚರ್ಚೆ ಶುರು
Team Udayavani, Sep 8, 2019, 5:30 AM IST
ನವದೆಹಲಿ: ನಮ್ಮ ಮೂಲ ಯಾವುದು ಎಂಬ ಬಗ್ಗೆ ಈವರೆಗೆ ಸಾಹಿತ್ಯ ಹಾಗೂ ಭಾಷೆಯ ಆಧಾರದಲ್ಲಿ ನಡೆಸಿದ ಸಂಶೋಧನೆಗಿಂತ ವಿಭಿನ್ನವಾದ ವರದಿಯೊಂದನ್ನು ಸಂಶೋಧಕರು ನೀಡಿದ್ದಾರೆ. 4500 ವರ್ಷಗಳ ಹಿಂದೆ ಹರ್ಯಾಣದಲ್ಲಿರುವ ಹರಪ್ಪಾ ನಾಗರೀಕತೆಯ ಸ್ಥಳ ರಾಖೀಗರಿಯಲ್ಲಿ ನಡೆಸಿದ ಉತVನನದ ವೇಳೆ ಸಿಕ್ಕ ಮಹಿಳೆಯ ಡಿಎನ್ಎ ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ.
ಹರಪ್ಪಾ ನಾಗರಿಕತೆಯಲ್ಲಿ ಕೃಷಿ ಮೂಲದ ಬಗ್ಗೆ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿದ ಡೆಕ್ಕನ್ ಕಾಲೇಜಿನ ಕುಲಪತಿ ಡಾ. ವಸಂತ್ ಶಿಂದೆ ನೇತೃತ್ವದ ತಂಡ ವಿಸ್ತೃತ ವರದಿಯನ್ನು ನೀಡಿದೆ. ಈ ವರದಿಯನ್ನು ವ್ಯಾಖ್ಯಾನಿಸಿದ ಕೆಲವರು, ಆರ್ಯನ್ನರು ದಕ್ಷಿಣ ಏಷ್ಯಾಗೆ ದಂಡೆತ್ತಿ ಬಂದರು ಎಂಬ ಸಿದ್ಧಾಂತವನ್ನೇ ವರದಿಯಲ್ಲಿ ತಳ್ಳಿಹಾಕಲಾಗಿದೆ ಎಂದಿದ್ದಾರೆ. ಆದರೆ ಇನ್ನೂ ಕೆಲವು ವ್ಯಾಖ್ಯಾನದ ಪ್ರಕಾರ, ಆರ್ಯನ್ನರು 4500 ವರ್ಷಗಳವರೆಗೆ ದಕ್ಷಿಣ ಏಷ್ಯಾಗೆ ದಂಡೆತ್ತಿ ಬಂದಿಲ್ಲ. ಅದರ ನಂತರ ಬಂದಿರಬಹುದು. ಆರ್ಯನ್ನರು ಭಾರತಕ್ಕೆ ದಂಡೆತ್ತಿ ಬಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ಉಲ್ಲೇಖವೇ ವರದಿಯಲ್ಲಿಲ್ಲ ಎಂದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆದಿದೆ.
ಅಧ್ಯಯನ ವರದಿಯು ಸಿಇಎಲ್ಎಲ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ಸಿಂಧೂ ನಾಗರಿಕತೆಯನ್ನು ಪಾಶ್ಚಾತ್ಯ ಮತ್ತು ಕೇಂದ್ರ ಏಷ್ಯಾದಿಂದ ಬಂದ ಆರ್ಯರು ರೂಪಿಸಿದ್ದಲ್ಲ. ಬದಲಿಗೆ ಇಲ್ಲಿಯದೇ ಜನರು ರೂಪಿಸಿದ ನಾಗರಿಕತೆ. ಆದರೆ ಸ್ಟೆಪ್ ಪ್ಯಾಸ್ಟೋರಲಿಸ್ಟ್ಗಳು ಅಥವಾ ಇರಾನಿ ರೈತರು ಬಂದಿದ್ದು ಹರಪ್ಪಾ ನಾಗರಿಕತೆಯ ಅವನತಿಯ ಕಾಲದಲ್ಲಿ ಎಂದು ಈ ಅಧ್ಯಯನ ಹೇಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ