ತಮಿಳುನಾಡಿನಲ್ಲಿ ಸಿಆರ್ಪಿಎಫ್ ಕಾನ್ಸ್ಟೆಬಲ್ ಆತ್ಮಹತ್ಯೆ
Team Udayavani, Jun 2, 2018, 5:03 PM IST
ಚೆನ್ನೈ : ಹರಿಯಾಣ ಮೂಲದ 41ರ ಹರೆಯದ ಸಿಆರ್ಪಿಎಫ್ ಕಾನ್ಸ್ಟೆಬಲ್ ರಾಜೇಶ್ ಕುಮಾರ್ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜೇಶ್ ಕುಮಾರ್ ಅವರ ಸಹೋದ್ಯೋಗಿಗಳಿಗೆ ಸಿಆರ್ಪಿಎಫ್ ಕ್ಯಾಂಪಿನಲ್ಲಿ ಗುಂಡಿನ ಸದ್ದು ಕೇಳಿ ಬಂದಾಗ ಅವರು ಅಲ್ಲಿಗೆ ಧಾವಿಸಿದರು. ರಾಜೇಶ್ ಕುಮಾರ್ ಸತ್ತು ಬಿದ್ದಿರುವುದನ್ನು ಕಂಡರು.
ರಾಜೇಶ್ ಕುಮಾರ್ ಸಾವಿಗೆ ಕಾರಣವೇನೆಂಬುದು ನಿಖರವಾಗಿ ಗೊತ್ತಾಗಿಲ್ಲ. ಆದರೆ ವರ್ಕ್ ಲೋಡ್ ನಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.