ತ.ನಾ: 140 ವರ್ಷಗಳಲ್ಲೇ ಘೋರ ಜಲ ಕ್ಷಾಮ; ಚೆನ್ನೈಗೆ ಶೇ.50 ನೀರು ಕಡಿತ
Team Udayavani, Jun 26, 2017, 6:52 PM IST
ಚೆನ್ನೈ : ತಮಿಳು ನಾಡು ಕಳೆದ 140 ವರ್ಷಗಳಲ್ಲೇ ಘೋರ ಎನಿಸಿರುವ ಜಲ ಕ್ಷಾಮಕ್ಕೆ ಗುರಿಯಾಗಿದ್ದು, ಚೆನ್ನೈ ಮಹಾನಗರ ಕಳೆದ ಕೆಲವು ತಿಂಗಳಿಂದ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ.
ಮಹಾನಗರದಲ್ಲಿನ ಎಲ್ಲ ನಾಲ್ಕು ಕರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಲಾಗಿದೆ.
ಚೆನ್ನೈ ನಗರಕ್ಕೆ ದಿನಂಪ್ರತಿ 83 ಕೋಟಿ ಲೀಟರ್ ಕುಡಿಯುವ ನೀರಿನ ಅಗತ್ಯವಿದೆ. ಕಳೆದ ಕೆಲವು ದಿನಗಳಿಂದ ಇದರ ಅರ್ಧದಷ್ಟು ಮಾತ್ರವೇ ನಗರಕ್ಕೆ ಪೂರೈಕೆಯಾಗುತ್ತಿದೆ. ನಗರದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು 300 ವಾಟರ್ ಟ್ಯಾಂಕರ್ಗಳನ್ನು ಬಳಸಲಾಗುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಚೆನ್ನೈಗೆ ಬೃಹತ್ ಕೊಳವೆಗಳ ಮೂಲಕ ನೀರು ಪೂರೈಕೆಯಾಗುವ, ಸುಮಾರು 200 ಕಿ.ಮೀ. ದೂರದಲ್ಲಿರುವ, ನೈವೇಲಿಯ ವೀರನಂ ಕೆರೆಯು ಸಂಪೂರ್ಣವಾಗಿ ಬತ್ತಿ ಹೋಗಿದೆ.
ಇದೇ ಪೈಪ್ ಲೈನ್ ಮೂಲಕ, ಇತರ ವಿವಿಧ ಜಲ ಮೂಲಗಳಿಂದ ದಿನಕ್ಕೆ 9 ಕೋಟಿ ಲೀಟರ್ ನೀರನ್ನು ತರಿಸಿಕೊಳ್ಳುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.
ದಿನಕ್ಕೆ 7.5 ಲಕ್ಷ ಲೀಟರ್ ನೀರಿನ ಅಗತ್ಯವಿರುವ ನಗರದ ಎಗ್ಮೋರ್ ರೈಲ್ವೇ ಸ್ಟೇಶನ್ ಈ ತಿಂಗಳ ಆದಿಯಿಂದ ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿದೆ.
ಚೆನೈ ನಗರದ ಅಂತರ್ಜಲ ಮರು ಪೂರಣವನ್ನು ನಗರದ 60 ಕಿ.ಮೀ. ಪರಿಧಿಯಲ್ಲಿರುವ ಐದು ಕೆರೆಗಳು ಮಾಡುತ್ತಿದ್ದು ಅವೆಲ್ಲವೂ ಈಗ ಬತ್ತಿ ಹೋಗಿರುವುದರಿಂದ ನೀರಿನ ತೀವ್ರ ಹಾಹಾಕಾರ ನಗರದಲ್ಲಿ ಉಂಟಾಗಿದೆ. 2105ರಲ್ಲಿ ಅಕಾಲಿಕ ಮಳೆಯಿಂದಾಗಿ ಈ ಕೆರೆಗಳು ಉಕ್ಕಿ ಹರಿದು ಚೆನ್ನೈ ನಗರದಲ್ಲಿ ಪ್ರವಾಹವನ್ನು ಸೃಷ್ಟಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ