ಕಿರಿಕಿರಿಯಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ
Team Udayavani, Apr 27, 2022, 1:00 PM IST
ಚೆನ್ನೈ: ಎಲೆಕ್ಟ್ರಿಕ್ ಬೈಕ್ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಲವು ಪ್ರಕರಣಗಳ ನಂತರ ತಮಿಳುನಾಡಿನ ತಿರುಪತ್ತೂರಿನ ನಿವಾಸಿ ಪೃಥಿವಿರಾಜ್ ಅವರು ಹಲವಾರು ತೊಂದರೆಗಳನ್ನು ಅನುಭವಿಸಿದ ನಂತರ ಉದ್ದೇಶಪೂರ್ವಕವಾಗಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹಚ್ಚಿದ್ದಾರೆ.
ಅಂಬೂರು ಬಳಿ ಆರ್ಥೋ ಮತ್ತು ನ್ಯೂರೋ ಕ್ಲಿನಿಕ್ ಅನ್ನು ನಿರ್ವಹಿಸುತ್ತಿರುವ ಪೃಥ್ವಿರಾಜ್ ಅವರು ಓಲಾ ಇ-ಬೈಕ್ ಖರೀದಿಸಿದ್ದಾರೆ. ಪಕ್ಕದಲ್ಲಿ ವಾಹನ ನೋಂದಣಿ ಕಚೇರಿ ಇದ್ದರೂ ಓಲಾ ಅಧಿಕಾರಿಗಳು ಸ್ಕೂಟರ್ ನೋಂದಣಿ ಮಾಡಲು ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಗುಡಿಯಾಟ್ಟಂಗೆ ಹೋಗಬೇಕು ಎಂದು ಹೇಳಿದ್ದಾರೆ ಎಂದು ಪೃಥ್ವಿರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಗುಡಿಯಾಟ್ಟಂ ಆರ್ಟಿಒ ನೋಂದಣಿ ಮಾಡಲು ನಿರಾಕರಿಸಿ, ಪೃಥ್ವಿರಾಜ್ ಅವರ ಮನೆ ಆರ್ಟಿಒ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದರು. ಆದಾಗ್ಯೂ, ಅವರ ಸಂಕಟಗಳು ಅಲ್ಲಿಗೆ ಮುಗಿಯಲಿಲ್ಲ.ಪ್ರಯಾಣದ ಮಧ್ಯೆ ಪೃಥ್ವಿರಾಜ್ ಸ್ಕೂಟರ್ ಕೆಟ್ಟು ನಿಂತಿದ್ದು, ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ . ಸೇವಾ ಕೇಂದ್ರಕ್ಕೆ ವಿಡಿಯೋ ಸಂದೇಶ ಕಳುಹಿಸಿದರೂ ಎರಡು ಗಂಟೆಗಳಾದರೂ ಯಾವುದೇ ಸಹಾಯ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಲ್ಲಾ ಕಿರಿಕಿರಿಗಳಿಂದ ಕೆರಳಿ ಕೋಪಗೊಂಡ ಪೃಥ್ವಿರಾಜ್ ಇ-ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಮತ್ತೊಬ್ಬ ಓಲಾ ಸ್ಕೂಟರ್ ಮಾಲೀಕರು ತಮ್ಮ ದ್ವಿಚಕ್ರ ವಾಹನವನ್ನು ಕತ್ತೆಗೆ ಕಟ್ಟಿ ರಸ್ತೆಯ ಉದ್ದಕ್ಕೂ ಎಳೆದಿದ್ದಾರೆ. ಅಷ್ಟೇ ಅಲ್ಲ, ಓಲಾ ಇ-ಸ್ಕೂಟರ್ಗಳನ್ನು ಖರೀದಿಸಬೇಡಿ ಎಂದು ಮಾಲಿಕರಾದ ಸಚಿನ್ ಗಿಟ್ಟೆ ಬ್ಯಾನರ್ಗಳನ್ನು ಪ್ರದರ್ಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್