ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ಪತ್ನಿ ಕೊಲೆ ಮಾಡಿದ ಪತಿ : ಹತ್ಯೆಗೆ ಕಾರಣ ಏನು ಗೊತ್ತಾ ?
Team Udayavani, Aug 9, 2021, 6:39 PM IST
ಮಧುರೈ : ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ಪತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ಶನಿವಾರ ನಡೆದಿದೆ. ಗ್ಲಾಡಿಸ್ ರಾಣಿ (20) ಕೊಲೆಯಾದ ದುರ್ದೈವಿ.
ಇದೆ ಆಗಸ್ಟ್ 2 ರಂದು ಜೋತಿಮನಿ ಎಂಬುವನ ಜೊತೆ ಗ್ಲಾಡಿಸ್ ರಾಣಿ ವಿವಾಹ ನಡೆದಿತ್ತು. ಮದುವೆಗೂ ಮುಂಚೆನೇ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆಗಸ್ಟ್ 4 ರಂದು ಈ ಜೋಡಿ ಹೊರಗೆ ಹೋಗಿತ್ತು. ಮನೆಗೆ ಜೋತಿಮನಿ ಒಬ್ಬನೆ ವಾಪಾಸ್ ಬಂದಿದ್ದ. ಹೆಂಡತಿ ಎಲ್ಲಿ ಅಂತಾ ಕೇಳಿದ ಮನೆಯವರಿಗೆ, ಆಕೆ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗಿ ಸುಳ್ಳು ಹೇಳಿದ್ದ.
ಆಗಸ್ಟ್ 7 ರಂದು ಮಧುರೈನ ಹೊರ ರಸ್ತೆಯ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಗ್ಲಾಡಿಸ್ ರಾಣಿಯ ಮೃತ ದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಇತ್ತ ಜೋತಿ ಮಣಿ ಕೂಡ ಆಗಸ್ಟ್ 5 ರಂದು ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ಕೂಡ ನೀಡಿದ್ದ. ಆದರೆ, ಆತನ ನಡುವಳಿಕೆ ಮೇಲೆ ಅನುಮಾನ ಪಟ್ಟ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಗೆ ಕಾರಣವೇನು ?
ಗ್ಲಾಡಿಸ್ ರಾಣಿಯ ಮನೆಯವರ ಬಲವಂತ ಹಾಕಿದ್ದರಿಂದ ನಾನು ಆಕೆಯನ್ನು ಮದುವೆಯಾದೆ ಎಂದು ಪೊಲೀಸರ ಎದುರು ಹೇಳಿರುವ ಜ್ಯೋತಿಮನಿ, ಮದುವೆಯ ಮುಂಚೆನೇ ಆಕೆ 4 ತಿಂಗಳ ಗರ್ಭಿಣಿಯಾಗಿದ್ದಳು. ಅವಳ ಗರ್ಭಕ್ಕೆ ಕಾರಣ ನಾನು ಅಲ್ಲ. ಅದಕ್ಕಾಗಿಯೇ ಮದುವೆಯಾಗಲು ನಿರಾಕರಿಸಿದ್ದೆ. ಆದರೆ, ಆಕೆಯ ಮನೆಯವರು ಬೆದರಿಕೆ ಹಾಕಿ ಮದುವೆ ಮಾಡಿಸಿದರು. ಆಗಸ್ಟ್ 4 ರಂದು ಮನೆಯಿಂದ ಹೊರಗೆ ಹೋದಾಗ ಇದೆ ವಿಚಾರಕ್ಕೆ ಗಲಾಟೆ ನಡೆಯಿತು. ಕೋಪ ತಾರಕಕ್ಕೇರಿದಾಗ ಆಕೆಯನ್ನು ಕೊಲೆ ಮಾಡಿ ಬೀಸಾಕಿದೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಕೊಲೆ ಪ್ರಕರಣದಡಿ ಪತಿಯನ್ನು ಬಂಧಿಸಿದ್ದು, ಈ ಕೃತ್ಯದಲ್ಲಿ ಮತ್ತೆ ಯಾರಾದರೂ ಶಾಮೀಲಾಗಿದ್ದಾರೆ ಎಂಬುದರ ಕುರಿತು ತನಿಖೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ