ತಮಿಳುನಾಡಲ್ಲಿ ಹೀಗೊಂದು ಮಾದರಿ ದೀಪಾವಳಿ!
Team Udayavani, Oct 20, 2017, 12:41 PM IST
ಚೆನ್ನೈ: ದೇಶದ ಪಟಾಕಿ ರಾಜಧಾನಿ ಯೆಂದೇ ಖ್ಯಾತಿ ಪಡೆದಿರುವ ತಮಿಳು ನಾಡು ರಾಜ್ಯದ ಹಲವೆಡೆ ಈ ಬಾರಿಯ ದೀಪಾವಳಿಯ ವೇಳೆ ಪಟಾಕಿ ಶಬ್ದವನ್ನು ನಿಲ್ಲಿಸಲಾಗಿದೆ. ಈ ಪಟಾಕಿ “ಹಠಾವೊ’ ನಿರ್ಧಾರ ಸರಕಾರಿ ಆದೇಶದಿಂದ ಆಗಿದ್ದಲ್ಲ, ಜನರೇ ಸ್ವಯಂಪ್ರೇರಿತರಾಗಿ ಕೈಗೊಂಡ ನಿರ್ಧಾರ. ಹಾಗಾಗಿ, ಈ ಬಾರಿಯ ದೀಪಾವಳಿ ಈ ಪ್ರದೇಶಗಳಲ್ಲಿ ಮಾದರಿ ದೀಪಾವಳಿ ಎಂದೆನಿಸಿದೆ. ಈ ರೀತಿ ಪಟಾಕಿ ನಿಷೇಧ ಜಾರಿ ಗೊಂಡಿರುವುದು ತಿರುನಲ್ವೇನಿ ಜಿಲ್ಲೆಯ ಕೂಥಂಕೂಳಂ, ಸೇಲಂ ಜಿಲ್ಲೆ ಯ ವಾ ವಲ್ ತೊಪ್ಪು, ಪೆರಂಬೂರು, ಕಂಚೀ ಪುರಂನ ವಿಶಾರ್ ಎಂಬ ಹಳ್ಳಿಗಳಲ್ಲಿ.
ಕೂಥಂಕೂಳಂ ಹಳ್ಳಿಯ ಬಳಿ ಪಕ್ಷಿಧಾಮವಿದೆ. ಅಲ್ಲಿ ಸಾಧಾರಣವಾಗಿ ಸೆಪ್ಟಂಬರ್, ಅಕ್ಟೋಬರ್, ನವೆಂಬರ್ ಮಾಸಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಳಿಂದ ಬಿಳಿ ಪೆಲಿಕನ್ ಹಕ್ಕಿಗಳು ವಲಸೆ ಬರುತ್ತವೆ. ಇದಲ್ಲದೆ ಫ್ಲಾಮಿಂಗೋ, ಸ್ಪನ್ಬಿಲ್, ಪೇಂಟೆಡ್ ಸ್ಟಾರ್ಕ್, ಎಗ್ರೆಟ್, ಡಕ, ಟೆರ್ನ್ ಹಾಗೂ ಐಬಿಎಸ್ನಂಥ ಅಪರೂಪದ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಆ ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಳ್ಳಿಯ ಜನರೇ ಪಟಾಕಿ ಸಿಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳಲ್ಲೂ ಧ್ವನಿವರ್ಧಕಗಳ ಬಳಸದಿರಲು ನಿರ್ಧರಿಸಲಾಗಿದೆ.
ಇದಲ್ಲದೆ, ವೇದಾಮುಗಮ್, ವೆಲ್ಲೂರ್, ಈರೋಡ್ಗಳಲ್ಲಿಯೂ ಪಟಾಕಿಗೆ ಸ್ವಯಂಪ್ರೇರಿತ ನಿಷೇಧ ಹೇರಲಾಗಿದೆ. ಆದರೆ, ಈ ಮೂರು ಹಳ್ಳಿಗಳ ವಿಶೇಷತೆಯೆಂದರೆ, ಇಲ್ಲಿ ಹೀಗೆ ಪಟಾಕಿ ನಿಷೇಧವಾಗುತ್ತಿರುವುದು ಸತತ 18ನೇ ದೀಪಾವಳಿಗೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ