ತಮಿಳು ನಾಡಿನಲ್ಲಿ ಡಿ ಎಮ್ ಕೆ, ಕಾಂಗ್ರೆಸ್ ನ ವಿಳಾಸ ಇಲ್ಲದಂತೆ ಮಾಡಿ : ಅಮಿತ್ ಶಾ
Team Udayavani, Apr 3, 2021, 3:52 PM IST
ಚೆನ್ನೈ : ಅಭಿವೃದ್ಧಿ ನಮ್ಮಿಂದ ಮಾತ್ರ ಆಗಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೇನಾಂಪೇಟ್ ನಲ್ಲಿ ರೋಡ್ ಶೋ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾ, ತಮಿಳು ನಾಡಿನಲ್ಲಿ ಡಿ ಎಮ್ ಕೆ ಹಾಗೂ ಕಾಂಗ್ರೆಸ್ ನ ವಿಳಾಸ ಇಲ್ಲದ ಹಾಗೆ ಮಾಡಿ ಎಂದು ಮತದಾದರನ್ನು ಕೇಳಿಕೊಂಡಿದ್ದಾರೆ.
ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ತಮಿಳು ನಾಡಿನ ಅಧಿಕಾರ ಹಿಡಿದರೆ ಮಾತ್ರ ತಮಿಳುನಾಡು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯ, ರಾಜ್ಯದ ಮಹಿಳೆಯರು, ಯುವಕರಿಗೆ, ನಿರುದ್ಯೋಗಿಗಳಿಗೆ, ಮೀನುಗಾರರಿಗೆ ನಾವು ಮಾತ್ರ ರಕ್ಷಣೆ ನೀಡಬಲ್ಲೆವು. ತಮಿಳು ನಾಡಿನ ಸಮೃದ್ಧ ಸಂಸ್ಕೃತಿಯ ರಕ್ಷಣೆ ನಮ್ಮಿಂದ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಓದಿ : 50% ಅದೇಶಕ್ಕೆ ಕನ್ನಡ ಚಿತ್ರರಂಗಕ್ಕೆ ಆಘಾತ : ಸರ್ಕಾರಕ್ಕೆ ತಾರೆಯರ ಒಕ್ಕೂರಲಿನ ಮನವಿ
ತಮಿಳು ನಾಡಿನಲ್ಲಿ ಡಿ ಎಮ್ ಕೆ ಹಾಗೂ ಕಾಂಗ್ರೆಸ್ ನ ವಂಶಪಾರಂಪರ್ಯ ರಾಜಕಾರಣಕ್ಕೆ ಪೂರ್ಣ ಬಿಂದು ಇಟ್ಟಾಗ ಮಾತ್ರ ತಮಿಳು ನಾಡು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ದೇಶದಲ್ಲಿ ಪ್ರಧಾನಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯನ್ನು ಕಾಣುತ್ತಿದೆ. ತಮಿಳು ನಾಡು ಕೂಡ ಅಭಿವೃದ್ದಿಯಾಗಬೇಕೆಂದರೇ, ನೀವು ನಮಗೆ ಮತ ಚಲಾಯಿಸಬೇಕು ಎಂದರು.
ಇನ್ನು ಥೌಸಂಡ್ ಲೈಟ್ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಖುಷ್ಬೂ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಅವರನ್ನು ಗೆಲ್ಲಿಸಿ. ಅವರು ನಿಮ್ಮ ವಿಧಾನ ಸಭಾ ಕ್ಷೇತ್ರವನ್ನು ಖಂಡಿತವಾಗಿ ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎಂದು ಭರವಸೆ ನೀಡಿದರು.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಥೌಸಂಡ್ ಲೈಟ್ ವಿಧಾನ ಸಭಾ ಕ್ಷೇತ್ರದ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಖುಷ್ಬೂ, ಅಮ್ಮನ ಆಡಳಿತ ತಮಿಳುನಾಡಿನಲ್ಲಿ ಮತ್ತೆ ಕಾಣಬೇಕೆಂದರೇ ನಮ್ಮ ಮೈತ್ರಿ -ಪಕ್ಷವನ್ನು ನೀವು ಗೆಲ್ಲಿಸಿ ಅಧಿಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
Union Home Minister and BJP leader Amit Shah holds a roadshow in Thousand Lights assembly constituency as he campaigns for the party’s candidate Khushbu Sundar.#TamilNaduElections2021 pic.twitter.com/hohWCwoG8O
— ANI (@ANI) April 3, 2021
ಓದಿ : ಐಪಿಎಲ್ ಗೆ ಕೋವಿಡ್ ಕಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನಿಗೆ ಕೋವಿಡ್ ಪಾಸಿಟಿವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ