ಹಿರಿಯ ತಮಿಳು ಕಾದಂಬರಿಕಾರ ಬಾಲಕುಮಾರನ್ ವಿಧಿವಶ
Team Udayavani, May 15, 2018, 4:27 PM IST
ಚೆನ್ನೈ : ಹಿರಿಯ ತಮಿಳು ಕಾದಂಬರಿಕಾರ ಬಾಲಕುಮಾರನ್ ಅವರು ಅಲ್ಪಾವಧಿಯ ಅಸೌಖ್ಯದ ಬಳಿಕ ಇಂದಿಲ್ಲಿ ತಮ್ಮ 71ರ ಹರೆಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಕವನ ಬರೆಯುವ ಮೂಲಕ ತಮಿಳು ಸಾಹಿತ್ಯ ರಂಗ ಪ್ರವೇಶಿಸಿದ ಬಾಲಕುಮಾರನ್ ಅವರು ಅನಂತರ ಕಾದಂಬರಿ ಪ್ರಕಾರಕ್ಕೆ ತಿರುಗಿ ಅಪಾರ ಯಶಸ್ಸು ಗಳಿಸಿ ಪ್ರಮುಖ ಕಾದಂಬರಿಕಾರನೆಂದು ಗುರುತಿಸಲ್ಪಟ್ಟರು. ಅನೇಕ ಸಣ್ಣ ಕತೆಗಳನ್ನೂ ಬರೆದಿರುವ ಅವರು ಅನಂತರ ಸಿನಿಮಾ ಚಿತ್ರಕಥೆ ಮತು ಸಂಭಾಷಣೆಗಳನ್ನು ಬರೆಯುವತ್ತ ತಿರುಗಿದರು. ರಜನೀಕಾಂತ್ ಅವರ ಬಾಷಾ ಮತ್ತು ಕಮಲ ಹಾಸನ್ ಅವರ ನಾಯಗನ್ ಮತ್ತು ಗುಣ ಚಿತ್ರಗಳಲ್ಲಿ ಬಾಲಕುಮಾರನ್ ದುಡಿದಿದ್ದರು.
ತಮಿಳು ನಾಡು ಸರಕಾರದಿಂದ ಕಲೈಮಾಮಣಿ ಸಹಿತ ಹಲವು ಪ್ರಶಸ್ತಿಗಳು ಬಾಲಕುಮಾರನ್ಗೆ ಸಂದಿವೆ. ಇವರು ನೂರಕ್ಕೂ ಹೆಚ್ಚು ಸಣ್ಣ ಕತೆಗಳನ್ನು ಮತ್ತು 200ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ.
ತಮಿಳು ನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ, ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಬಾಲಕುಮಾರನ್ ನಿಧನಕ್ಕೆ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್