ದೇಶವಿರೋಧಿ ಶಕ್ತಿಗಳಿಗೆ ತಮಿಳುನಾಡು ಸ್ವರ್ಗವಾಗಿದೆ :ಅಣ್ಣಾಮಲೈ ಕಿಡಿ
ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣ....
Team Udayavani, Oct 27, 2022, 10:06 AM IST
ಚೆನ್ನೈ : ”ಎಲ್ಲಾ ದೇಶವಿರೋಧಿ ಶಕ್ತಿಗಳಿಗೆ ತಮಿಳುನಾಡಿನಲ್ಲಿ ಬಂದು ಅಡಗಿಕೊಳ್ಳಲು ರಾಜ್ಯದ ಮಣ್ಣು ಸ್ವರ್ಗವಾಗಿದೆ” ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕಿಡಿ ಕಾರಿದ್ದಾರೆ.
ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿಯ ನಂತರ ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ. ಅವರು ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ್ದಾರೆ. ರಾಜ್ಯ ಸರ್ಕಾರದ ಮನಸ್ಥಿತಿಯ ಬಗ್ಗೆ ನಾವು ಹೆಚ್ಚು ಚಿಂತಿತರಾಗಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
“ಆಂತರಿಕ ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಂಪೂರ್ಣವಾಗಿ ಸುಳಿವಿಲ್ಲದ ಇಂತಹ ಅಸಮರ್ಥ ಸರ್ಕಾರವನ್ನು ನಾವು ಎಲ್ಲೂ ನೋಡಿಲ್ಲ. ಈ ಕಾರಣಕ್ಕಾಗಿಯೇ ಎಲ್ಲಾ ದೇಶವಿರೋಧಿ ಶಕ್ತಿಗಳು ಇಲ್ಲಿಗೆ ಬಂದು ಅಡಗಿಕೊಳ್ಳಲು ತಮಿಳು ಮಣ್ಣು ಸ್ವರ್ಗವಾಗಿದೆ ಎಂದು ಹೇಳಿದ್ದೇನೆ’ ಎಂದರು.
ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣದಲ್ಲಿ ಜಮೇಶಾ ಮುಬಿನ್ ಸಾವನ್ನಪ್ಪಿದ್ದು, ಆತನ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಆತನಿಗೆ ಐಸಿಸ್ ಉಗ್ರರ ನಂಟು ಹೊಂದಿರುವುದು ತನಿಖೆ ವೇಳೆ ಕಂಡು ಬಂದಿರುವ ಕಾರಣ ತನಿಖೆಯನ್ನು ಎನ್ ಐಎ ಗೆ ನೀಡಲಾಗಿದೆ.