ನೀರಿಗಾಗಿ ಪ್ರತಿಭಟಿಸಿದ್ದಕ್ಕೆ ಸೆರೆ : ಕೊಯಮತ್ತೂರಲ್ಲಿ 550 ಮಂದಿ ಅರೆಸ್ಟ್
Team Udayavani, Jun 21, 2019, 6:27 AM IST
ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೆಲ ದಿನಗಳ ಹಿಂದೆ ನೀರಿ ಗಾಗಿ ಹೊಡೆದಾಟ ಸಂಭವಿಸಿತ್ತು. ಇದೀಗ ಕೊಯಮತ್ತೂರಿನಲ್ಲಿ ಬುಧವಾರ ನೀರು ಪೊರೈಕೆಗಾಗಿ ಒತ್ತಾಯಿಸಿ ಖಾಲಿ ಕೊಡಪಾನ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ 550 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ “ಸಿಎನ್ಎನ್’ ವರದಿ ಮಾಡಿದೆ. ನೀರು ಪೂರೈಕೆ ಮಾಡುವ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಪ್ರತಿಭಟನ ಕಾರರು ಆರೋಪಿಸಿದ್ದಾರೆ.
ಇದೇ ವೇಳೆ ಚೆನ್ನೈನಲ್ಲಿ ಗುರುವಾರ ಏಕಾಏಕಿ ಮಳೆಯಾಗಿದೆ. ಒಂದೇ ದಿನ 29 ಮಿ.ಮೀ. ಮಳೆ ಯಾಗಿದೆ. ಮುಂದಿನ 2 ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ 40 ಡಿ.ಸೆ ತಾಪಮಾನ ಇರಲಿದೆ. ಜತೆಗೆ ಕೆಲ ಪ್ರದೇಶ ಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ, ತಮಿಳುನಾಡಿಗೆ 20 ಲಕ್ಷ ಲೀ. ಕುಡಿಯುವ ನೀರು ಒದಗಿಸಲು ಕೇರಳ ಸರಕಾರ ಗುರುವಾರ ಮುಂದೆ ಬಂದಿದೆ.
ಮುಂದಿನ ವರ್ಷ ಬೆಂಗ್ಳೂರಲ್ಲಿ ಜಲಕ್ಷಾಮ
ನೀತಿ ಆಯೋಗ ಸಿದ್ಧಪಡಿಸಿದ ವರದಿಯ ಪ್ರಕಾರ 2030ರ ವೇಳೆಗೆ ಬೆಂಗಳೂರಿನಲ್ಲಿ ಕುಡಿವ ನೀರಿಗೆ ಕೊರತೆ ಉಂಟಾದೀತು. ಹೀಗಾಗಿ, ಸ್ಥಳೀಯವಾಗಿ ಇರುವ ಜಲ ಮೂಲ ರಕ್ಷಣೆಗೆ ತ್ವರಿತವಾಗಿ ಕಾರ್ಯೋ ನ್ಮುಖ ವಾಗಲೇಬೇಕೆಂದು ಸಲಹೆ ಮಾಡಿದೆ. ಹೊಸದಿಲ್ಲಿ, ಹೈದರಾಬಾದ್, ಚೆನ್ನೈ,
ಬೆಂಗಳೂರಲ್ಲಿ 2020ರ ವೇಳೆ ಅಂತರ್ಜಲ
ಬರಿದಾಗಲಿದೆ. 21 ನಗರಗಳಲ್ಲಿನ ನೀರಿನ ಲಭ್ಯತೆ ಅಧ್ಯಯನದಲ್ಲಿ ಉಲ್ಲೇಖೀ ಸಲಾಗಿದೆ. ಹೊಸದಿಲ್ಲಿಯಲ್ಲಿ ಕೂಡ ಅಂತರ್ಜಲ ಕೊರತೆ ಗಂಭೀರ ವಾಗಿದೆ. ಹೀಗಾಗಿ ಮಳೆ ನೀರಿನ ಕೊಯ್ಲು ವ್ಯವಸ್ಥೆಯನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕೆಂದು ತಂಡದ ಸದಸ್ಯ ಪ್ರೊ. ಮನೋಹರ್ ಖುಷಲಾನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ