“ಭಾರತರತ್ನ ಅಭಿಯಾನ’ ನಿಲ್ಲಿಸಲು ಟಾಟಾ ಮನವಿ
Team Udayavani, Feb 7, 2021, 9:00 AM IST
ಮುಂಬಯಿ: ಬಿರುದು, ಪ್ರಶಸ್ತಿಗಳಿಗಾಗಿ ಕ್ಯೂ ನಿಲ್ಲುವ, ಲಾಬಿ ಮಾಡುವವರ ಮಧ್ಯೆ ಖ್ಯಾತ ಉದ್ಯಮಿ ರತನ್ ಟಾಟಾ ಆದರ್ಶ ಎತ್ತಿಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ “ಭಾರತರತ್ನ ಫಾರ್ ರತನ್ ಟಾಟಾ’ ಹ್ಯಾಶ್ ಟ್ಯಾಗ್ಗೆ ಪ್ರತಿಕ್ರಿಯಿಸಿರುವ ಅವರು, “ನನಗೆ ಭಾರತರತ್ನ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಅಭಿಯಾನವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ
ಇದು ನನ್ನ ಅದೃಷ್ಟ: “ಗೌರವಗಳ ಬದಲಿಗೆ, ಭಾರತೀಯನಾಗಿರುವುದೇ ನನ್ನ ಪಾಲಿಗೆ ಅದೃಷ್ಟದ ಸಂಗತಿ. ಭಾರತದ ಬೆಳವಣಿಗೆಗೆ, ಸಮೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲು ಶ್ರಮಿಸುವೆನು’ ಎಂದು ಟ್ವೀಟ್ ಮಾಡಿದ್ದಾರೆ. ಸ್ಫೂರ್ತಿ ಭಾಷಣಕಾರ ಡಾ| ವಿವೇಕ್ ಭಿಂದ್ರಾ, ಈ ಹ್ಯಾಶ್ ಟ್ಯಾಗ್ ಸೃಷ್ಟಿಸಿದ ಬಳಿಕ ಸಹಸ್ರಾರು ಮಂದಿ “ರತನ್ ಟಾಟಾ ಭಾರತರತ್ನಕ್ಕೆ ಅರ್ಹರು’, “ರಿಯಲ್ ಹೀರೋ ಆಫ್ ಇಂಡಿಯಾ’ ಎಂದು ಟ್ವೀಟ್ ಮಾಡಿದ್ದರು. ಭಾರತದ ಏಳ್ಗೆಗೆ ರತನ್ ಟಾಟಾ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್