ಇನ್ನು ತತ್ಕಾಲ್ ಸುಲಭ, ಟಿಕೆಟ್ಗಳೂ ಭರಪೂರ
ಆನ್ಲೈನ್ ರೈಲ್ವೇ ಟಿಕೆಟ್ ಬುಕ್ಕಿಂಗ್ಗೆ ಅಂಟಿದ್ದ ಕಳ್ಳ ಸಾಫ್ಟ್ವೇರ್ಗಳ ನಿರ್ಮೂಲನೆ
Team Udayavani, Feb 19, 2020, 6:30 AM IST
ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ರೈಲ್ವೇ ಸುರಕ್ಷತಾ ದಳ (ಆರ್ಪಿಎಫ್) ಸಿಹಿ ಸುದ್ದಿ ನೀಡಿದೆ. ತತ್ಕಾಲ್ ಸೇವೆಯಡಿ ರೈಲು ಟಿಕೆಟ್ಗಳನ್ನು ಬ್ಲಾಕ್ ಮಾಡಲು ಬಳಸಲಾಗುತ್ತಿದ್ದ ಸಾಫ್ಟ್ವೇರ್ಗಳನ್ನು ಬೇರು ಸಹಿತ ನಿರ್ಮೂಲನೆಗೊಳಿಸಿದೆ.
ಜತೆಗೆ ತತ್ಕಾಲ್ ಟಿಕೆಟ್ ಬ್ಲಾಕಿಂಗ್ಗೆ ನೆರವಾಗುತ್ತಿದ್ದ 60 ಟಿಕೆಟ್ ಬುಕಿಂಗ್ ಏಜೆಂಟರನ್ನು ಬಂಧಿಸಲಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ತತ್ಕಾಲದ ಎಲ್ಲ ಟಿಕೆಟ್ಗಳೂ ಭರಪೂರವಾಗಿ ಲಭ್ಯವಾಗುವಂತೆ ಅನುವು ಮಾಡಲಾಗಿದೆ.
ದಿಲ್ಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಪಿಎಫ್ ಮಹಾ ನಿರ್ದೇಶಕ ಅರುಣ್ ಕುಮಾರ್, “ನಕಲಿ ಸಾಫ್ಟ್ ವೇರ್ನ ದಂಧೆಕೋರರು ವರ್ಷಕ್ಕೆ 50ರಿಂದ 100 ಕೋಟಿ ರೂ. ಸಂಪಾದಿಸುತ್ತಿದ್ದರು.
ಈಗ ಅವರ ಆಟ ನಿಂತಿದೆ. ರೈಲ್ವೇ ಇಲಾಖೆಯ ಕ್ರಮದಿಂದಾಗಿ ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಉಂಟಾಗುತ್ತಿದ್ದ ಟಿಕೆಟ್ ಬ್ಲಾಕಿಂಗ್ ಪಿಡುಗು ಈಗ ಮಾಯವಾಗಿದೆ ಎಂದು ತಿಳಿಸಿದರು.
ಈಗ 10 ಗಂಟೆ ಟಿಕೆಟ್ ಲಭ್ಯ!
ಎಎನ್ಎಂಎಸ್, ಮ್ಯಾಕ್, ಜಾಗ್ವಾರ್ನಂಥ ಸಾಫ್ಟ್ವೇರ್ಗಳು ಐಆರ್ಸಿಟಿಸಿಯ ಲಾಗಿನ್ ಕ್ಯಾಪc, ಬುಕಿಂಗ್ ಕ್ಯಾಪc ಹಾಗೂ ಬ್ಯಾಂಕ್ನಿಂದ ಬರುವ “ಒನ್ ಟೈಮ್ ಪಾಸ್ವರ್ಡ್’ (ಒ.ಟಿ.ಪಿ.)ಗಳನ್ನು ಬಳಸದೆಯೇ ಟಿಕೆಟ್ಗಳನ್ನು ಸೃಷ್ಟಿಸುತ್ತಿದ್ದವು. ಈ ಮೂಲಕ ಹಲವಾರು ಟಿಕೆಟ್ಗಳನ್ನು ಕ್ಷಣಮಾತ್ರದಲ್ಲಿ ಬ್ಲಾಕ್ ಮಾಡಲಾಗುತ್ತಿತ್ತು. ಈಗ ಅವೆಲ್ಲವೂ ನಿಂತಿದೆ. ಹಿಂದೆ ಕೇವಲ 2 ನಿಮಿಷಗಳಲ್ಲಿ ಖಾಲಿಯಾಗುತ್ತಿದ್ದ ತತ್ಕಾಲ್ ಟಿಕೆಟ್ಗಳು ಈಗ ಬುಕ್ಕಿಂಗ್ ಆರಂಭಗೊಂಡ 10 ಗಂಟೆಗಳವರೆಗೂ ಲಭ್ಯ ಎಂದು ಅರುಣ್ ಕುಮಾರ್ ವಿವರಿಸಿದರು.
ಐಆರ್ಸಿಟಿಸಿಯ ಪಿಡುಗು ನಿವಾರಣೆ
ತತ್ಕಾಲ್ಗೆ ಅಡ್ಡಿಯೊಡ್ಡುತ್ತಿದ್ದ ಸಾಫ್ಟ್ವೇರ್ಗಳನ್ನಷ್ಟೇ ಅಲ್ಲದೆ, ಐಆರ್ಸಿಟಿಸಿಯ ಸೇವೆಗಳನ್ನು ದಂಧೆಯಾಗಿ ಬಳಸಿಕೊಳ್ಳುವಲ್ಲಿ ನೆರವಾಗುತ್ತಿದ್ದ ಎಲ್ಲ ಬಗೆಯ ಸಾಫ್ಟ್ ವೇರ್ಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ನಿರ್ವಹಿಸುತ್ತಿದ್ದ ತಂತ್ರಜ್ಞರನ್ನೂ ಬಂಧಿಸಲಾಗಿದೆ. ಇದರಿಂದ ಜನರಿಗೆ ರೈಲು ಟಿಕೆಟ್ ಸಿಗುವಂತಾಗಿದೆ ಎಂದು ಅರುಣ್ ತಿಳಿಸಿದ್ದಾರೆ.
ಟೆರರ್ ಲಿಂಕ್
ಟಿಕೆಟ್ ಬ್ಲಾಕಿಂಗ್ ಹಿಂದಿನ ರಹಸ್ಯದ ಬೆನ್ನು ಹತ್ತಿದ್ದ ಆರ್ಪಿಎಫ್, ಈ ಮಹಾ ಕರ್ಮಕಾಂಡದ ರೂವಾರಿ ಎನ್ನಲಾದ ಕೋಲ್ಕತಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಾಂಗ್ಲಾದೇಶ ಮೂಲದ ಜೆಯುಎಂಬಿ ಉಗ್ರ ಸಂಘಟನೆ ಜತೆಗೆ ಆತ ನಂಟು ಹೊಂದಿರುವ ಬಗ್ಗೆ ಶಂಕೆಯಿದ್ದು ತನಿಖೆ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅರುಣ್, ಪ್ರಕರಣದಡಿ ಬಂಧಿಸಲಾಗಿರುವ 60 ಏಜೆಂಟರಲ್ಲಿ ಅನೇಕರು ಜೆಯುಎಂಬಿ ಜತೆಗೆ ನಂಟು ಹೊಂದಿರುವ ಶಂಕೆ ಇದೆ. ಈ ದಂಧೆಯಿಂದ ಬಂದ ಹಣವನ್ನು ಭಯೋತ್ಪಾದನೆಗೆ ಹಾಗೂ ಅಕ್ರಮ ಹಣ ವರ್ಗಾವಣೆಗೆ ಬಳಸಲಾಗುತ್ತಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ