ಇನ್ನು ತತ್ಕಾಲ್‌ ಸುಲಭ, ಟಿಕೆಟ್‌ಗಳೂ ಭರಪೂರ

ಆನ್‌ಲೈನ್‌ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ಗೆ ಅಂಟಿದ್ದ ಕಳ್ಳ ಸಾಫ್ಟ್ವೇರ್‌ಗಳ ನಿರ್ಮೂಲನೆ

Team Udayavani, Feb 19, 2020, 6:30 AM IST

thatkal

ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ರೈಲ್ವೇ ಸುರಕ್ಷತಾ ದಳ (ಆರ್‌ಪಿಎಫ್) ಸಿಹಿ ಸುದ್ದಿ ನೀಡಿದೆ. ತತ್ಕಾಲ್‌ ಸೇವೆಯಡಿ ರೈಲು ಟಿಕೆಟ್‌ಗಳನ್ನು ಬ್ಲಾಕ್‌ ಮಾಡಲು ಬಳಸಲಾಗುತ್ತಿದ್ದ ಸಾಫ್ಟ್ವೇರ್‌ಗಳನ್ನು ಬೇರು ಸಹಿತ ನಿರ್ಮೂಲನೆಗೊಳಿಸಿದೆ.

ಜತೆಗೆ ತತ್ಕಾಲ್‌ ಟಿಕೆಟ್‌ ಬ್ಲಾಕಿಂಗ್‌ಗೆ ನೆರವಾಗುತ್ತಿದ್ದ 60 ಟಿಕೆಟ್‌ ಬುಕಿಂಗ್‌ ಏಜೆಂಟರನ್ನು ಬಂಧಿಸಲಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ತತ್ಕಾಲದ ಎಲ್ಲ ಟಿಕೆಟ್‌ಗಳೂ ಭರಪೂರವಾಗಿ ಲಭ್ಯವಾಗುವಂತೆ ಅನುವು ಮಾಡಲಾಗಿದೆ.

ದಿಲ್ಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಪಿಎಫ್ ಮಹಾ ನಿರ್ದೇಶಕ ಅರುಣ್‌ ಕುಮಾರ್‌, “ನಕಲಿ ಸಾಫ್ಟ್ ವೇರ್‌ನ ದಂಧೆಕೋರರು ವರ್ಷಕ್ಕೆ 50ರಿಂದ 100 ಕೋಟಿ ರೂ. ಸಂಪಾದಿಸುತ್ತಿದ್ದರು.

ಈಗ ಅವರ ಆಟ ನಿಂತಿದೆ. ರೈಲ್ವೇ ಇಲಾಖೆಯ ಕ್ರಮದಿಂದಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ಶುರುವಾದ ಕೆಲವೇ ನಿಮಿಷಗಳಲ್ಲಿ ಉಂಟಾಗುತ್ತಿದ್ದ ಟಿಕೆಟ್‌ ಬ್ಲಾಕಿಂಗ್‌ ಪಿಡುಗು ಈಗ ಮಾಯವಾಗಿದೆ ಎಂದು ತಿಳಿಸಿದರು.

ಈಗ 10 ಗಂಟೆ ಟಿಕೆಟ್‌ ಲಭ್ಯ!
ಎಎನ್‌ಎಂಎಸ್‌, ಮ್ಯಾಕ್‌, ಜಾಗ್ವಾರ್‌ನಂಥ ಸಾಫ್ಟ್ವೇರ್‌ಗಳು ಐಆರ್‌ಸಿಟಿಸಿಯ ಲಾಗಿನ್‌ ಕ್ಯಾಪc, ಬುಕಿಂಗ್‌ ಕ್ಯಾಪc ಹಾಗೂ ಬ್ಯಾಂಕ್‌ನಿಂದ ಬರುವ “ಒನ್‌ ಟೈಮ್‌ ಪಾಸ್‌ವರ್ಡ್‌’ (ಒ.ಟಿ.ಪಿ.)ಗಳನ್ನು ಬಳಸದೆಯೇ ಟಿಕೆಟ್‌ಗಳನ್ನು ಸೃಷ್ಟಿಸುತ್ತಿದ್ದವು. ಈ ಮೂಲಕ ಹಲವಾರು ಟಿಕೆಟ್‌ಗಳನ್ನು ಕ್ಷಣಮಾತ್ರದಲ್ಲಿ ಬ್ಲಾಕ್‌ ಮಾಡಲಾಗುತ್ತಿತ್ತು. ಈಗ ಅವೆಲ್ಲವೂ ನಿಂತಿದೆ. ಹಿಂದೆ ಕೇವಲ 2 ನಿಮಿಷಗಳಲ್ಲಿ ಖಾಲಿಯಾಗುತ್ತಿದ್ದ ತತ್ಕಾಲ್‌ ಟಿಕೆಟ್‌ಗಳು ಈಗ ಬುಕ್ಕಿಂಗ್‌ ಆರಂಭಗೊಂಡ 10 ಗಂಟೆಗಳವರೆಗೂ ಲಭ್ಯ ಎಂದು ಅರುಣ್‌ ಕುಮಾರ್‌ ವಿವರಿಸಿದರು.

ಐಆರ್‌ಸಿಟಿಸಿಯ ಪಿಡುಗು ನಿವಾರಣೆ
ತತ್ಕಾಲ್‌ಗೆ ಅಡ್ಡಿಯೊಡ್ಡುತ್ತಿದ್ದ ಸಾಫ್ಟ್ವೇರ್‌ಗಳನ್ನಷ್ಟೇ ಅಲ್ಲದೆ, ಐಆರ್‌ಸಿಟಿಸಿಯ ಸೇವೆಗಳನ್ನು ದಂಧೆಯಾಗಿ ಬಳಸಿಕೊಳ್ಳುವಲ್ಲಿ ನೆರವಾಗುತ್ತಿದ್ದ ಎಲ್ಲ ಬಗೆಯ ಸಾಫ್ಟ್ ವೇರ್‌ಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ನಿರ್ವಹಿಸುತ್ತಿದ್ದ ತಂತ್ರಜ್ಞರನ್ನೂ ಬಂಧಿಸಲಾಗಿದೆ. ಇದರಿಂದ ಜನರಿಗೆ ರೈಲು ಟಿಕೆಟ್‌ ಸಿಗುವಂತಾಗಿದೆ ಎಂದು ಅರುಣ್‌ ತಿಳಿಸಿದ್ದಾರೆ.

ಟೆರರ್‌ ಲಿಂಕ್‌
ಟಿಕೆಟ್‌ ಬ್ಲಾಕಿಂಗ್‌ ಹಿಂದಿನ ರಹಸ್ಯದ ಬೆನ್ನು ಹತ್ತಿದ್ದ ಆರ್‌ಪಿಎಫ್, ಈ ಮಹಾ ಕರ್ಮಕಾಂಡದ ರೂವಾರಿ ಎನ್ನಲಾದ ಕೋಲ್ಕತಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಾಂಗ್ಲಾದೇಶ ಮೂಲದ ಜೆಯುಎಂಬಿ ಉಗ್ರ ಸಂಘಟನೆ ಜತೆಗೆ ಆತ ನಂಟು ಹೊಂದಿರುವ ಬಗ್ಗೆ ಶಂಕೆಯಿದ್ದು ತನಿಖೆ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅರುಣ್‌, ಪ್ರಕರಣದಡಿ ಬಂಧಿಸಲಾಗಿರುವ 60 ಏಜೆಂಟರಲ್ಲಿ ಅನೇಕರು ಜೆಯುಎಂಬಿ ಜತೆಗೆ ನಂಟು ಹೊಂದಿರುವ ಶಂಕೆ ಇದೆ. ಈ ದಂಧೆಯಿಂದ ಬಂದ ಹಣವನ್ನು ಭಯೋತ್ಪಾದನೆಗೆ ಹಾಗೂ ಅಕ್ರಮ ಹಣ ವರ್ಗಾವಣೆಗೆ ಬಳಸಲಾಗುತ್ತಿತ್ತು ಎಂದಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.