ಶೀಘ್ರ ಬದಲಾಗಲಿದೆ ತೆರಿಗೆ ನೀತಿ
ನೇರ ತೆರಿಗೆ ನೀತಿ ಕುರಿತ ವರದಿ ಸಲ್ಲಿಸಿದ ಸಮಿತಿ
Team Udayavani, Aug 20, 2019, 5:00 AM IST
ಹೊಸದಿಲ್ಲಿ: 50 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನಿಗೆ ನರೇಂದ್ರ ಮೋದಿ ಸರಕಾರ ಬದಲಾವಣೆ ತರಲಿದೆ. ಸಾರ್ವ ಜನಿಕರಿಗೆ ಆದಾಯ ತೆರಿಗೆ ಪಾವತಿ ಮಾಡು ವುದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಬದಲಾವಣೆ ಇರಲಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿ ಡಿಟಿ) ಸದಸ್ಯ ಅಖೀಲೇಶ್ ರಂಜನ್ ಅವರ ನೇತೃತ್ವದ ಕಾರ್ಯಪಡೆ ಈಗಾಗಲೇ ನೇರ ತೆರಿಗೆ ನೀತಿ ವರದಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಸೋಮವಾರ ಸಲ್ಲಿಸಿದೆ.
ಈ ಸಮಿತಿಯ ವರದಿಯನ್ನು ಜಾರಿಗೊಳಿಸಿ ದರೆ 1961ರಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ ಮರೆಗೆ ಸರಿಯಲಿದೆ. ಮೋದಿ ಸರಕಾರದ ಹಿಂದಿನ ಅವಧಿಯಲ್ಲಿ ಅರುಣ್ ಜೇಟಿÉ ವಿತ್ತ ಸಚಿವರಾಗಿದ್ದಾಗ 2017 ನವೆಂ ಬರ್ನಲ್ಲಿ ಈ ಕಾರ್ಯಪಡೆಯನ್ನು ರಚನೆ ಮಾಡ ಲಾಗಿತ್ತು. 2019 ಮೇ 31ಕ್ಕೆ ಈ ಸಮಿತಿ ಅಂತಿಮ ವರದಿ ನೀಡಬೇಕಿತ್ತಾದರೂ, ಅವಧಿ ವಿಸ್ತರಣೆಯ ಅನಂತರ ಸೋಮವಾರ ವರದಿ ಸಲ್ಲಿಕೆಯಾಗಿದೆ. ಸಮಿತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಗಿರೀಶ್ ಅಹುಜಾ, ಇವೈ ಮುಖ್ಯಸ್ಥ ರಾಜೀವ್ ಮೆಮಾನಿ, ತೆರಿಗೆ ವಕೀಲ ಮುಖೇಶ್ ಪಟೇಲ್, ಐಸಿಆರ್ಐಇಆರ್ ಸಲಹೆಗಾರ ಮನ್ಸಿ ಕೆದಿಯಾ ಹಾಗೂ ನಿವೃತ್ತ ಐಆರ್ಎಸ್ ಅಧಿಕಾರಿ ಜಿ.ಸಿ. ಶ್ರೀವಾಸ್ತವ ಸದಸ್ಯರಾಗಿದ್ದರು.
ಇದರಲ್ಲಿ ಕೇವಲ ನೌಕರರಿಗೆ ತೆರಿಗೆ ಪಾವತಿ ಸುಲಭಗೊಳಿಸುವುದಷ್ಟೇ ಅಲ್ಲ, ರಿಟರ್ನ್ ಸಲ್ಲಿಸುವವರಿಗೂ ಅನುಕೂಲ ಕಲ್ಪಿಸುವ ಸಾಧ್ಯತೆಗಳಿವೆ. ಇದರ ಒಟ್ಟು ಪರಿಣಾಮವಾಗಿ ತೆರಿಗೆ ದಾರರ ಸಂಖ್ಯೆ ಹೆಚ್ಚಳ ಕಾಣುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ