ಚಹಾ ವ್ಯಾಪಾರಿಯ ಮಗಳು ವಾಯುಪಡೆಯ ಪೈಲಟ್!
Team Udayavani, Jun 24, 2020, 8:40 AM IST
ಭೋಪಾಲ್: ಅಪ್ಪ ಬಸ್ ನಿಲ್ದಾಣದಲ್ಲಿ ಚಹಾ ವ್ಯಾಪಾರಿ. ಹಗಲು ರಾತ್ರಿಯೆನ್ನದೆ ದುಡಿದು ಕೂಡಿಟ್ಟ ಚಿಲ್ಲರೆ ಕಾಸಿನಲ್ಲಿ ಮಗಳನ್ನು ಓದಿಸಿದ. ಈಗ ಮಗಳು ಭಾರತೀಯ ವಾಯುಪಡೆಯ ಪೈಲಟ್! ಮಧ್ಯಪ್ರದೇಶದ ನೀಮಚ್ ಬಸ್ಸುನಿಲ್ದಾಣದ ಚಹಾ ವ್ಯಾಪಾರಿಯ ಮಗಳು ಅಂಚಲ್ ಗಂಗ್ವಾಲ್ ಇತ್ತೀಚೆಗಷ್ಟೇ ವಾಯುಪಡೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಸೇರಿಕೊಂಡಿದ್ದಾರೆ. ಈಕೆಯ ಪೈಲಟ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಎಷ್ಟೋ ಸಮಯದಲ್ಲಿ ಕಾಲೇಜು ಶುಲ್ಕ ಕಟ್ಟಲು ತಂದೆಯ ಬಳಿ ಹಣವೇ ಇರುತ್ತಿರಲಿಲ್ಲ.
ಟರ್ನಿಂಗ್ ಪಾಯಿಂಟ್: 2013ರಲ್ಲಿ ಕೇದಾರನಾಥದಲ್ಲಿ ಮೇಘಸ್ಫೋಟವಾದಾಗ ಭೀಕರ ಪ್ರವಾಹ ಉಂಟಾಗಿತ್ತು. ಈ ವೇಳೆ ಭಾರತೀಯ ವಾಯುಪಡೆಯ ಯೋಧರು ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ್ದರು. ವೀರಯೋಧರ ಆ ಸಾಹಸ ನೋಡಿ ತಾನೂ ವಾಯುಪಡೆ ಸೇರಬೇಕು ಎಂದು ಅಂಚಲ್ಗೆ ಅನ್ನಿಸಿತಂತೆ. ಸತತ 6 ಬಾರಿಯ ಪ್ರಯತ್ನದ ಬಳಿಕ ಕೊನೆಗೂ ಕನಸು ಈಡೇರಿತು.
“ನನ್ನ ಮಗಳು ಈ ಹಂತಕ್ಕೆ ಏರಲು ಬಹಳ ಪರಿಶ್ರಮ ಪಟ್ಟಿದ್ದಾಳೆ’ ಎಂದು ತಂದೆ ಸುರೇಶ್ ಗಂಗ್ವಾಲ್ ಹೆಮ್ಮೆ ಪಡುತ್ತಾರೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್, ಅಂಚಲ್ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ