ನವರಾತ್ರಿ ಕಾರ್ಯಕ್ರಮದಿಂದ ಮನೆಗೆ ಮರಳುತ್ತಿದ್ದ ಬಾಲಕಿಯ ಅಪಹರಣ
Team Udayavani, Oct 17, 2018, 11:39 AM IST
ಥಾಣೆ, ಮಹಾರಾಷ್ಟ್ರ : ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿದ್ದ ಗಾರ್ಭಾ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಿ ಮನೆಯವರೊಂದಿಗೆ ಮನೆಗೆ ಮರಳುತ್ತಿದ್ದ 17ರ ಹರೆಯದ ಬಾಲಕಿಯನ್ನು ಆಕೆಯ ಇಬ್ಬರು ನೆರೆಕರೆಯ ವ್ಯಕ್ತಿಗಳೇ ಬಲವಂತದಿಂದ ಕಾರಿನಲ್ಲಿ ತುಂಬಿ ಅಪಹರಿಸಿರುವ ಘಟನೆ ವರದಿಯಾಗಿದೆ.
ಹುಡುಗಿಯು ಬದ್ಲಾಪುರ ಟೌನ್ಶಿಪ್ ನ ರಮೇಶ್ ವಾಡಿ ಪ್ರದೇಶದ ನಿವಾಸಿ. ಗಾರ್ಭಾ ನೃತ್ಯ ಕಾರ್ಯಕ್ರಮ ವೀಕ್ಷಿಸಿ ತನ್ನ ಚಿಕ್ಕಮ್ಮ ಮತ್ತು ಸೋದರಿಯೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ನರೆಕರೆಯ ವ್ಯಕ್ತಿಗಳಿಬ್ಬರು ಆಕೆಯನ್ನು ಬಲವಂತದಿಂದ ಕಾರಿಗೆ ಹಾಕಿ ಅಪಹರಿಸಿದರು.
ಒಡನೆಯೇ ಹುಡುಗಿಯ ಚಿಕ್ಕಮ್ಮ ವಿಷಯವನ್ನು ಆಕೆಯ ಹೆತ್ತವರಿಗೆ ತಿಳಿಸಿದಳು. ಅಪಹರಣಕಾರರನ್ನು ಆಕೆ ನೆರೆಕರೆಯ ವ್ಯಕ್ತಿಗಳೆಂದು ಗುರುತಿಸಿರುವುದಾಗಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಪೊಲೀಸರೀಗ ಅಪಹೃತ ಬಾಲಕಿ ಮತ್ತು ಆಕೆಯ ಅಪಹರಣಕಾರರಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ