ಆರ್ ಜೆ ಡಿ ಸೇರ್ಪಡೆಗೊಳ್ಳಲು ಚಿರಾಗ್ ಪಾಸ್ವಾನ್ ಗೆ ತೇಜಸ್ವಿ ಯಾದವ್ ಆಹ್ವಾನ..!
Team Udayavani, Jun 23, 2021, 9:32 PM IST
ನವ ದೆಹಲಿ : ಬಿಹಾರದ ಎಲ್ ಜೆ ಪಿ ನಾಯಕತ್ವದ ಬಂಡಾಯದ ಮಧ್ಯೆ, ಚಿರಾಗ್ ಪಾಸ್ವಾನ್ ರಾಷ್ಟ್ರೀಯ ಜನತಾದಳ (ಆರ್ ಜೆ ಡಿ) ನೇತೃತ್ವದ ಮೈತ್ರಿಗೆ ಸೇರುವಂತೆ ತೇಜಸ್ವಿ ಯಾದವ್ ಆಹ್ವಾನಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ, ಯಾದವ್, ಇದು ಚಿರಾಗ್ ಗೆ ಬಿಟ್ಟ ವಿಚಾರ. ಆರ್ ಎಸ್ ಎಸ್ ನಂತಹ ಕೋಮುವಾದದ ಪಕ್ಷದಲ್ಲಿಯೇ ಮುಂದುವರಿಯುತ್ತಾರಾ ಅಥವಾ ಜನಪರ ಪಕ್ಷಕ್ಕೆ ಸೇರುತ್ತಾರಾ ಎನ್ನುವುದು ಅವರ ಕಾದು ನೋಡಬೇಕು.
ಇದನ್ನೂ ಓದಿ : ಪಶ್ಚಿಮ ಬಂಗಾಳವನ್ನು ವಿಭಜಿಸಲು ಕೇಂದ್ರ ಸಂಚು ರೂಪಿಸಿದೆ : ದೀದಿ ಆರೋಪ
ಆರ್ ಎಸ್ ಎಸ್ ನೊಂದಿಗೆ ಇರಲು ಬಯಸುತ್ತಾರೋ ಅಥವಾ ಸಂವಿಧಾನದೊಂದಿಗೆ ಇರುವವರ ಜೊತೆ ಬರುತ್ತಾರೋ ಎನ್ನುವುದು ಚಿರಾಗ್ ಭಾಯ್ ಯೋಚನೆ ಮಾಡಬೇಕಾಗಿದೆ ಎಂದಿದ್ದಾರೆ.
ಜೋಡ್-ಟೋಡ್ ರಾಜಕೀಯ ಮಾಡಿದ್ದಿದ್ದರೇ ಬಿಹಾರ ಅಭಿವೃದ್ಧಿಯಾಗುತ್ತಿತ್ತು..!
ಇನ್ನು, ನಿತೀಶ್ ಕುಮಾರ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಯಕೊಂಡ ಅವರು, “ಎಲ್ ಜೆಪಿ ಯಲ್ಲಿ ಮಾಡಿದ ಕುತಂತ್ರದ ಹಿಂದಿನ ಸೂತ್ರಧಾರಿ ಯಾರೆಂದು ಎಲ್ಲರಿಗೂ ತಿಳಿದಿದೆ. ನಿತೀಶ್ ಕುಮಾರ್ ತಮ್ಮ ಸಮಯವನ್ನು ಜೋಡ್-ಟೋಡ್ ರಾಜಕೀಯ ಮಾಡಲು ಬಳಸದಿದ್ದರೆ, ಬಿಹಾರದ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.
ಸಂಸತ್ತಿನ ಕೆಳಮನೆಯಲ್ಲಿದ್ದ ತನ್ನ ಆರು ಸಂಸದರಲ್ಲಿ ಐವರು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಾಗ ಎಲ್ ಜೆ ಪಿ ಭಾರಿ ಹಿನ್ನಡೆ ಕಂಡ ಕೆಲವು ದಿನಗಳ ನಂತರ ಯಾದವ್ ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ಇದನ್ನೂ ಓದಿ : ಗಂಗಾವತಿ : ಪಡಿತರ ಅಕ್ಕಿ ಅಕ್ರಮ ಸಾಗಾಟ : ಆಹಾರ ಇಲಾಖೆ- ಪೊಲೀಸರ ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು