ದೇಶದ ಹತ್ತು ಕೋವಿಡ್ 19 ಹಾಟ್ಸ್ಪಾಟ್ಗಳು
Team Udayavani, Apr 1, 2020, 7:46 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಸೋಂಕು ದೇಶವ್ಯಾಪಿ ಹಬ್ಬುತ್ತಿರುವ ನಡುವೆಯೇ ಕೇಂದ್ರ ಸರಕಾರವು 10 ಹಾಟ್ ಸ್ಪಾಟ್ಗಳನ್ನು ಗುರುತಿಸಿದೆ. 10ಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಅಂಥ ಸ್ಥಳವನ್ನು ಕ್ಲಸ್ಟರ್ ಎಂದು ಗುರುತಿಸಲಾಗುತ್ತದೆ. ಒಂದೇ ಪ್ರದೇಶದಲ್ಲಿ ಹಲವಾರು ಕ್ಲಸ್ಟರ್ಗಳು ಹುಟ್ಟಿಕೊಂಡರೆ, ಅಂಥ ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ.
1. ನಿಜಾಮುದ್ದೀನ್, ನವದೆಹಲಿ
ಆಗಿದ್ದೇನು?: ಮಾ.1ರಿಂದ 15ರವರೆಗಿನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿ. ಹಲವರಲ್ಲಿ ರೋಗಲಕ್ಷಣ. 35ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್. 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ಗೆ.
2. ದಿಲ್ಶಾದ್ ಗಾರ್ಡನ್, ನವದೆಹಲಿ
ಆಗಿದ್ದೇನು?: ಸೌದಿ ಅರೇಬಿಯಾದಿಂದ ಆಗಮಿಸಿದ್ದ ರೋಗಿಯಲ್ಲಿ ಸೋಂಕು ಇತ್ತು. ಚಿಕಿತ್ಸೆ ಪಡೆದಿದ್ದ ಮೊಹಲ್ಲಾ ಕ್ಲಿನಿಕ್ ಮುಚ್ಚಿ, ಅಲ್ಲಿಗೆ ಬಂದಿದ್ದವರೆಲ್ಲರ ಕ್ವಾರಂಟೈನ್.
3. ಭಿಲ್ವಾರಾ, ರಾಜಸ್ಥಾನ
ಆಗಿದ್ದೇನು?: ಆಸ್ಪತ್ರೆಯೊಂದರ 6 ವೈದ್ಯರು, ಸಿಬಂದಿಗೆ ಸೋಂಕು ದೃಢ. 20 ಲಕ್ಷಕ್ಕೂ ಹೆಚ್ಚು ಮಂದಿ ನಿಗಾದಲ್ಲಿ.
4. ಮೀರತ್, ಉತ್ತರಪ್ರದೇಶ
ಆಗಿದ್ದೇನು?: ದುಬೈನಿಂದ ವಾಪಸಾಗಿದ್ದ ವ್ಯಕ್ತಿಯಲ್ಲಿ ಸೋಂಕು. ಒಟ್ಟು 35 ಮಂದಿ ಕ್ವಾರಂಟೈನ್ಗೆ.
5. ಗೌತಮಬುದ್ಧ ನಗರ, ಉತ್ತರಪ್ರದೇಶ
ಆಗಿದ್ದೇನು?: ಖಾಸಗಿ ಕಂಪನಿಯ ನೌಕರರ ಮೂಲಕ ಹಬ್ಬಿದ ವೈರಸ್. ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿ 1,865 ಮಂದಿ ಮೇಲೆ ನಿಗಾ. ಖಾಸಗಿ ಕಂಪನಿ ಜತೆ ನೇರ ಮತ್ತು ಪರೋಕ್ಷ ಸಂಪರ್ಕ ಹೊಂದಿದವರ ಮಾಹಿತಿ ಸಂಗ್ರಹ ಶುರು
6. ಮುಂಬಯಿ, ಮಹಾರಾಷ್ಟ್ರ
ಆಗಿದ್ದೇನು?: ನಿವೃತ್ತ ವೈದ್ಯ ಸಾವಿಗೀಡಾದ ಬಳಿಕ ಪುತ್ರನಲ್ಲಿ ಸೋಂಕು. ವೈದ್ಯನಿದ್ದ ಆಸ್ಪತ್ರೆ ಸದ್ಯಕ್ಕೆ ಮುಚ್ಚಲು ಆದೇಶ. ಜಾಗೃತಿ ಮೂಡಿಸಲು ಕ್ರಮ.
7. ಪುಣೆ
ಆಗಿದ್ದೇನು?: ಹೆಚ್ಚಿನ ಜನಸಂಖ್ಯೆ ಇದ್ದ ಕಾರಣ ಬೇಗ ವ್ಯಾಪಿಸಿದ ವೈರಸ್. ಸಂಪೂರ್ಣ ಸ್ತಬ್ಧ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಆಸ್ಪತ್ರೆಗಳಿಗೆ ರವಾನೆ.
8. ಅಹಮದಾಬಾದ್, ಗುಜರಾತ್
ಆಗಿದ್ದೇನು?: 3 ಸಾವು. ಮೃತರೊಂದಿಗೆ ಸಂಪರ್ಕ ಹೊಂದಿರುವವರ ಮೇಲೆ ನಿಗಾ, ಚಿಕಿತ್ಸೆ
9. ಕಾಸರಗೋಡು, ಕೇರಳ
ಆಗಿದ್ದೇನು?: 82 ಪ್ರಕರಣಗಳ ಪೈಕಿ 72 ಪ್ರಕರಣಗಳಿಗೆ ವಿದೇಶಿ ಮೂಲವಿದೆ. ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಅತ್ಯವಶ್ಯಕ ವಸ್ತುಗಳು ಬಿಟ್ಟರೆ ಬೇರೇನೂ ಸಿಗುತ್ತಿಲ್ಲ. ಸಾವಿರಾರು ಮಂದಿಯನ್ನು ಪ್ರತ್ಯೇಕಿಸಲ್ಪಟ್ಟ ಕೊಠಡಿಗಳಲ್ಲಿ ಇಟ್ಟು ನಿಗಾ ವಹಿಸಲಾಗಿದೆ.
10. ಪಟ್ಟಣಂತಿಟ್ಟ, ಕೇರಳ
ಆಗಿದ್ದೇನು?: ಗಲ್ಫ್ ರಾಷ್ಟ್ರಗಳಿಂದ ವಾಪಸಾಗಿರುವವರ ಮೂಲಕ ಹರಡಿದ ಸೋಂಕು. ಸೋಂಕಿತರ ಕುಟುಂಬ ಸದಸ್ಯರು, ಸಂಬಂಧಿಕರು, ನೇರವಾಗಿ ಸಂಪರ್ಕಕ್ಕೆ ಬಂದವರನ್ನು ನಿಗಾದಲ್ಲಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ