ಅಕ್ಟೋಬರ್ 08 ರ ಒಳಗೆ ರೇವಾರಿ ರೈಲ್ವೇ ನಿಲ್ದಾಣ ಸ್ಪೋಟಿಸುತ್ತೇವೆ: ಜೈಶ್ ಬೆದರಿಕೆ ಪತ್ರ
Team Udayavani, Sep 15, 2019, 9:21 PM IST
ಹರ್ಯಾಣದಲ್ಲಿರುವ ರೇವಾರಿ ರೈಲು ನಿಲ್ದಾಣವನ್ನು ಮತ್ತು ಹಲವು ದೇವಸ್ಥಾನಗಳನ್ನು ಅಕ್ಟೋಬರ್ 8ರ ಒಳಗೆ ಸ್ಪೋಟಿಸುತ್ತೇವೆ ಎಂದು ಪಾಕಿಸ್ಥಾನ ಉಗ್ರಗಾಮಿ ಸಂಘಟನೆ ಜೈಶ್-ಇ-ಮಹಮ್ಮದ್ (ಜೆ.ಇ.ಎಂ.) ಬೆದರಿಕೆ ಪತ್ರ ಒಂದನ್ನು ಕಳುಹಿಸಿದೆ. ಮಸೂದ್ ಎಂಬ ವ್ಯಕ್ತಿ ಕರಾಚಿಯಿಂದ ಈ ಬೆದರಿಕೆ ಪತ್ರವನ್ನು ಕಳುಹಿಸಿದ್ದಾನೆ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಹಾಗಾಗಿ ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ಈ ಪತ್ರವನ್ನು ಕಳುಹಿಸಿರಬಹುದೇ ಎಂದು ಪೊಲೀಸರು ಇದೀಗ ಶಂಕಿಸುತ್ತಿದ್ದಾರೆ.
ಈ ಬೆದರಿಕೆ ಪತ್ರ ಪೊಲೀಸರ ಕೈ ಸೇರಿದ ಬಳಿಕ ರೇವಾರಿ ರೈಲು ನಿಲ್ದಾಣದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಜೈಶ್ ಸಂಘಟನೆಯ ಜಲ ದಾಳಿ ಘಟಕವು ಜಲಮಾರ್ಗಗಳ ಮೂಲಕ ಭಾರತದಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗಳಿಗೆ ಈಗಾಗಲೇ ಲಭ್ಯವಾಗಿದ್ದು, ಈ ರೀತಿಯ ಯಾವುದೇ ಸಂಭವನೀಯ ದಾಳಿಗಳನ್ನು ಮಟ್ಟಹಾಕಲು ಭಾರತೀಯ ನೌಕಾಪಡೆ ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೇ, ಭಾರತದ ಮೇಲೆ ದಾಳಿ ನಡೆಸಲು ಕನಿಷ್ಠ 50 ಜನ ಜೈಶ್ ಉಗ್ರರು ಆಳ ಸಮುದ್ರ ಈಜು ತರಬೇತಿಯಲ್ಲಿ ತೊಡಗಿದ್ದಾರೆ ಎಂದು ಗಡಿ ಭದ್ರತಾ ಪಡೆಗಳು ನೀಡಿರುವ ಮಾಹಿತಿಗಳಿಂದ ಬಹಿರಂಗಗೊಂಡಿದೆ.
ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಉಗ್ರಗಾಮಿಗಳಿಗೆ ತರಬೇತು ನೀಡಲಾಗುತ್ತಿದೆ ಎಂದು ತಮಗೆ ಲಭ್ಯವಾಗಿರುವ ಮಾಹಿತಿಯನ್ನು ಬಿ.ಎಸ್.ಎಫ್. ಸದರ್ನ್ ಕಮಾಂಡ್ ಗೆ ರವಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು