ಸೇನೆಗೆ ಇನ್ನು ಯುವಶಕ್ತಿ
Team Udayavani, Feb 26, 2018, 8:45 AM IST
ಹೊಸದಿಲ್ಲಿ: ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಬಗ್ಗೆ ಸೇನೆ ಚಿಂತನೆ ನಡೆಸಿದೆ. ಸೇನೆಗೆ ಸದ್ಯ ಯುವ ಪಡೆಯ ಅಗತ್ಯವಿದೆ. ಹೀಗಾಗಿ ಚೀನ ಮತ್ತು ಪಾಕಿಸ್ತಾನದ ಗಡಿಯಂತಹ ಸಂಕೀರ್ಣ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಯೋಧರ ವಯೋಮಿತಿ ಇಳಿಸುವುದರ ಜತೆಗೆ, ಕೆಲವು ಮಹತ್ವದ ಹುದ್ದೆಗಳಲ್ಲಿ ನೇಮಕಗೊಂಡಿರುವವರ ನಿವೃತ್ತಿ ವಯೋಮಿತಿಯನ್ನು ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಅರ್ಹ ವ್ಯಕ್ತಿಯನ್ನು ಸೂಕ್ತ ಹುದ್ದೆಯಲ್ಲಿ ನಿಯೋಜಿಸುವುದು ಸಾಧ್ಯವಾಗಲಿದೆ.
ಬ್ರಿಗೇಡ್ ಕಮಾಂಡರ್ಗಳು, ವಿಭಾಗೀಯ ಕಮಾಂಡರ್ಗಳು ಮತ್ತು ಕೋರ್ ಕಮಾಂಡರ್ಗಳಂತಹ ಪ್ರಮುಖ ಹುದ್ದೆಗಳಲ್ಲಿರುವವರ ವಯೋಮಿತಿಯನ್ನು ಹೆಚ್ಚಿಸಲು ಬಡ್ತಿ ನೀತಿಯನ್ನು ಪರಿಷ್ಕರಿಸಲಾಗುತ್ತಿದೆ. ಈ ಹಿಂದೆ ಕಾಪ್ಸ್ ಕಮಾಂಡರ್ 24 ತಿಂಗಳು ಸೇವೆ ಸಲ್ಲಿಸಿದ್ದರೆ ಮಾತ್ರವೇ ಬಡ್ತಿಗೆ ಅರ್ಹರಾಗುತ್ತಿದ್ದರು. ಆದರೆ ಈಗ 18 ತಿಂಗಳು ಸೇವೆ ಸಲ್ಲಿಸಿದರೆ ಸಾಕು, ಅವರನ್ನು ಬಡ್ತಿಗೆ ಪರಿಗಣಿಸಲು ನಿರ್ಧರಿಸಲಾಗುತ್ತಿದೆ.
ಕಳೆದ ವರ್ಷ ನಡೆದ ಉನ್ನತ ಕಮಾಂಡರ್ಗಳ ಸಭೆಯಲ್ಲೇ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸೇನೆಯ ಮಾನವ ಸಂಪನ್ಮೂಲ ನೀತಿಯನ್ನು ಸಮಗ್ರವಾಗಿ ಬದಲಿಸಲಾಗುತ್ತಿದೆ. ಇದರ ಮೂಲ ಉದ್ದೇಶವೇ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ಇನ್ನೊಂದೆಡೆ ಸೇನೆಯಲ್ಲಿನ ಅಶಿಸ್ತನ್ನೂ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಐಟಿಬಿಪಿ ಯೋಧರಿಗೆ ಚೀನೀ ಭಾಷೆ: ಭಾರತ ಚೀನ ಗಡಿಯಲ್ಲಿ ಸಂವಹನ ಸಮಸ್ಯೆಯನ್ನು ನೀಗಿಸಲು ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಯ ಯೋಧರಿಗೆ ಚೀನೀ ಭಾಷೆಯನ್ನು ಬೋಧಿಸಲು ನಿರ್ಧರಿಸಲಾಗಿದೆ. ಮಧ್ಯಪ್ರದೇಶದಲ್ಲಿನ ರೈಸೆನ್ನಲ್ಲಿರುವ ಸಂಚಿ ವಿವಿಯಲ್ಲಿ ಚೀನೀ ಭಾಷೆಯನ್ನು ಐಟಿಬಿಪಿಯ 25 ಯೋಧರು ಮೊದಲ ಹಂತದಲ್ಲಿ ಕಲಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು