ಮತ ಎಣಿಕೆಯ ದಿನ ಗೋವಾದ ಜನರಿಗೆ ನಿಜವಾದ ದೀಪಾವಳಿ: ಚೋಡಣಕರ್
Team Udayavani, Nov 4, 2021, 3:05 PM IST
ಪಣಜಿ: ಗೋವಾದಲ್ಲಿ ಇಂದು ನರಕಾಸುರನ ದಹನ ಮಾಡಲಾಗುತ್ತಿದೆಯಾದರೂ ಬರುವ ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ಗೋವಾದ ಜನತೆ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ ಎಂದು ಗೋವಾ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ನುಡಿದರು.
ಮಾಪ್ಸಾದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಆಯೋಜಿಸಿದ್ದ “ಮಾರಗಾಯಿಸುರ್” ಕಾರ್ಯಕ್ರಮದಲ್ಲಿ ಸಿಲಿಂಡರ್ ಹಿಡಿದ ನರಕಾಸುರನ ಪ್ರತಿಮೆಯನ್ನು ದಹನ ಮಾಡಲಾಯಿತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ;- ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?
ಇಂದಿನಿಂದ ರಾಕ್ಷಸರನ್ನು ಹೊಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಗೋವಾ ರಾಜ್ಯದ ಜನರು ಅಧಿಕಾರದಲ್ಲಿರುವ ರಾಜ್ಯ ರಾಜಕೀಯ ನರಕಾಸುರರನ್ನು ಖಾಯಂ ಆಗಿ ಮನೆಗೆ ಕಳುಹಿಸಲಿದ್ದಾರೆ. ನಂತರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ರಾಜ್ಯದ ಜನರೆ ನಿಜವಾದ ದೀಪಾವಳಿ ಆಚರಿಸಲಿದ್ದಾರೆ. ರಾಜ್ಯದ ಜನತೆ ಸದ್ಯ ಎದುರಿಸುತ್ತಿರುವ ಸಂಕಷ್ಟ ಶೀಘ್ರವೇ ದೂರವಾಗಲಿದೆ ಎಂದು ಗಿರೀಶ್ ಚೋಡಣಕರ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು