ಸವಾಲು ಮೆಟ್ಟಿನಿಂತ ಮಾಡೆರ್ನಾ

30 ದಿನ ಈ ಲಸಿಕೆ ಫ್ರಿಜ್‌ನಲ್ಲಿ ಸುರಕ್ಷಿತ ; ಶೇ.94.5ರಷ್ಟು ಪರಿಣಾಮಕಾರಿ

Team Udayavani, Nov 18, 2020, 6:11 AM IST

ಸವಾಲು ಮೆಟ್ಟಿನಿಂತ ಮಾಡೆರ್ನಾ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸದ್ಯದಲ್ಲೇ ಲಭ್ಯವಾಗಲಿರುವ ಅಮೆರಿಕದ ಮಾಡೆರ್ನಾ ಲಸಿಕೆಯು ಕೋವಿಡ್ ವಿರುದ್ಧ ಶೇ.94.5ರಷ್ಟು ಪರಿಣಾಮಕಾರಿ ಎಂಬುದು ಮಾನವನ ಮೇಲಿನ ಪ್ರಯೋಗ­ದಿಂದ ಸಾಬೀತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಕೊರೊನಾ ಲಸಿಕೆಗೆ ಸಂಬಂಧಿಸಿದ ಅತಿ ದೊಡ್ಡ ಸವಾಲಾದ “ಅಲ್ಟ್ರಾ ಕೋಲ್ಡ್‌ ಟೆಂಪರೇಚರ್‌'(ಅತ್ಯಧಿಕ ಶೀತ ತಾಪಮಾನ) ವಿಚಾರದಲ್ಲೂ ಒಂದು ಹೆಜ್ಜೆ ಮುಂದಿರುವುದಾಗಿ ಮಾಡೆರ್ನಾ ಹೇಳಿದೆ. ಈ ಲಸಿಕೆಯು 30 ದಿನಗಳ ಕಾಲ ಫ್ರಿಜ್‌ನಲ್ಲಿ ಸುರಕ್ಷಿತವಾಗಿ­ರುತ್ತದೆ. ಅಲ್ಲದೆ, ಇದನ್ನು ದೀರ್ಘ‌ಕಾಲದ ಬಳಕೆಗಾಗಿ ಸಾಮಾನ್ಯ ಫ್ರೀಜರ್‌ನಲ್ಲೂ ಇಡಬಹುದು ಎಂದು ಕಂಪನಿ ಹೇಳಿದೆ.

ಭಾರತದಿಂದ ಆಫ್ರಿಕಾದವರೆಗೆ ಹಲವು ದೇಶಗಳಲ್ಲಿ ಲಸಿಕೆಯನ್ನು ಕುಗ್ರಾಮಗಳಿಗೆ ತಲುಪಿಸುವುದು ಕಷ್ಟದ ಕೆಲಸ. ಪೂರೈಕೆ ಹಾಗೂ ಸಾಗಣೆ ಸಮಸ್ಯೆಯ ಜೊತೆಗೆ “ಲಸಿಕೆಯನ್ನು ಸುರಕ್ಷಿತವಾಗಿಡುವ ತಾಪಮಾನ’ದ್ದೇ ದೊಡ್ಡ ಸವಾಲು. “ಮಂಜುಗಡ್ಡೆಯಂತೆ ಗಟ್ಟಿಯಾದ ಮಾಂಸ’­ಕ್ಕಿಂತಲೂ ಅತ್ಯಧಿಕ ತಾಪಮಾನದಲ್ಲಿಟ್ಟರೆ ಮಾತ್ರವೇ ಲಸಿಕೆ ಸುರಕ್ಷಿತವಾಗಿರುತ್ತದೆ. ಹೀಗಾಗಿ, ಮಾಡೆರ್ನಾ ವ್ಯಾಕ್ಸಿನ್‌ ಹೊಸ ಭರವಸೆ ಮೂಡಿಸಿದೆ. ಕಳೆದ ವಾರ ಘೋಷಿಸಲ್ಪಟ್ಟ ಫೈಜರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿಯಲ್ಲಿ ಇಟ್ಟರಷ್ಟೇ ಅದು ಸುರಕ್ಷಿತವಾಗಿರುತ್ತದೆ ಮತ್ತು ರೆಫ್ರಿಜರೇಟರ್‌ನಲ್ಲೂ ಅದರ ಬಾಳಿಕೆ ಕೇವಲ 5 ದಿನಗಳಷ್ಟೇ ಎಂದು ಕಂಪನಿ ಹೇಳಿತ್ತು. ಇದೇ ವೇಳೆ, ಕೆಲವೇ ದಿನಗಳಲ್ಲಿ ಆಸ್ಟ್ರಜೆನಿಕಾ ಕಂಪನಿಯು ತನ್ನ ಲಸಿಕೆಯ ದತ್ತಾಂಶವನ್ನು ಬಿಡುಗಡೆ ಮಾಡಲಿದೆ.

4 ತಿಂಗಳಲ್ಲೇ ಗಣನೀಯ ಇಳಿಕೆ: ಕಳೆದ 4 ತಿಂಗಳಲ್ಲೇ ದೇಶದ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರದಿಂದ ಕೆಳಗಿಳಿದಿದ್ದು, ಸೋಮವಾರದಿಂದ ಮಂಗಳವಾರಕ್ಕೆ 29,163 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ449 ಮಂದಿ ಮೃತಪಟ್ಟಿದ್ದು, ಅಸುನೀಗಿದವರ ಸಂಖ್ಯೆ 1,30,519 ಆಗಿದೆ. ಈ ಹಿಂದೆ ಜು.15ರಂದು ಸೋಂಕಿತರ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆಯಿತ್ತು.

ಕೊರೊನಾ ವಕ್ಕರಿಸಿ ವರ್ಷ ಪೂರ್ಣ ಜಗತ್ತನ್ನೇ ಅಲ್ಲೋಲಕಲ್ಲೋಲ ವಾಗಿಸಿದ, ಮನುಕುಲವನ್ನೇ ನರಕಕ್ಕೆ ದೂಡಿದ ಕೊರೊನಾ ಸೋಂಕು ಚೀನದ ವುಹಾನ್‌ನಲ್ಲಿ ಪತ್ತೆಯಾಗಿ ಮಂಗಳವಾರಕ್ಕೆ ವರ್ಷ ತುಂಬಿದೆ. ವುಹಾನ್‌ನ ವನ್ಯಜೀವಿ ಮಾರುಕಟ್ಟೆಯಲ್ಲಿ 2019ರ ನವೆ ಂಬರ್‌ 17ರಂದು 55 ವರ್ಷದ ವ್ಯಕ್ತಿಯ ದೇಹ ಪ್ರವೇಶಿಸಿದ ಕೋವಿಡ್‌-19 ವೈರಸ್‌, ನಂತರದಲ್ಲಿ 190 ದೇಶಗಳನ್ನು ಆವರಿಸಿ, 13 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ಜಗತ್ತಿನಾದ್ಯಂತ 5 ಕೋಟಿಗೂ ಅಧಿಕ ಮಂದಿಯನ್ನು ಈ ಸೋಂಕು ಬಾಧಿಸಿದೆ.

ಪ್ರಮುಖ ಲಸಿಕೆಗಳು
ಫೈಜರ್‌/ಬಯೋನ್‌ಟೆಕ್‌
ಎಷ್ಟು ಪರಿಣಾಮಕಾರಿ? 90%
ಬಳಕೆಗೆ ಸಿದ್ಧ- ಡಿಸೆಂಬರ್‌ 2020
3ನೇ ಹಂತದ ಪ್ರಯೋಗ ಆರಂಭ- ಜುಲೈ

ಸ್ಪುಟ್ನಿಕ್‌ 5/ಗಮಲೇಯಾ ಸಂಶೋಧನಾ ಸಂಸ್ಥೆ
ಎಷ್ಟು ಪರಿಣಾಮಕಾರಿ? 92%
ಸಂಗ್ರಹಿಸಲು ಬೇಕಾದ ತಾಪಮಾನ 2- 80c
ಬಳಕೆಗೆ ಸಿದ್ಧ- ಡಿಸೆಂಬರ್‌ 2020 (ಭಾರತದಲ್ಲಿ 3ನೇ ಹಂತದ ಪ್ರಯೋಗ 2021ರ ಮಾರ್ಚ್‌ನಲ್ಲಿ ಪೂರ್ಣ)
3ನೇ ಹಂತದ ಪ್ರಯೋಗ ಆರಂಭ- ಆಗಸ್ಟ್‌

ಆಸ್ಟ್ರಜೆನಿಕಾ/ಆಕ್ಸ್‌ಫ‌ರ್ಡ್‌ ವಿವಿ
ಎಷ್ಟು ಪರಿಣಾಮಕಾರಿ?- ಮಾಹಿತಿ ಬಹಿರಂಗವಾಗಿಲ್ಲ
ಸಂಗ್ರಹಿಸಲು ಬೇಕಾದ ತಾಪಮಾನ 2- 80c
ಬಳಕೆಗೆ ಸಿದ್ಧ- ಡಿಸೆಂಬರ್‌ 2020
2, 3ನೇ ಹಂತದ ಪ್ರಯೋಗ ಆರಂಭ- ಮೇ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.