ಮೇಘಾಲಯ ಗಣಿಯಲ್ಲಿರುವ 15 ಕಾರ್ಮಿಕರ ಸ್ಥಿತಿ ಅತಂತ್ರ
Team Udayavani, Dec 27, 2018, 6:00 AM IST
ಶಿಲ್ಲಾಂಗ್: ಮೇಘಾಲಯದ ಪೂರ್ವ ಜೈಂತಿಯಾ ಜಿಲ್ಲೆಯ ಲುಮ್ತಾರಿ ಗ್ರಾಮದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ 15 ಮಂದಿಯ ರಕ್ಷಣಾ ಕಾರ್ಯ ಅತಂತ್ರವಾಗಿದೆ. ಡಿ.13 ರಂದು ಈ ಘಟನೆ ನಡೆದಿದ್ದು, ಬುಧವಾರಕ್ಕೆ 14 ದಿನ ಪೂರೈಸಿದೆ. 370 ಅಡಿ ಕೆಳಗಿನ ಭಾಗದಲ್ಲಿನ ಗಣಿ ಪ್ರದೇಶದಲ್ಲಿ ನೀರು ತುಂಬಿ ದುರಂತ ಉಂಟಾಗಿದೆ.
ಡಿ.13ರಂದು 20 ಕಾರ್ಮಿಕರು ಕಲ್ಲಿದ್ದಲು ಗಣಿಗೆ ಪ್ರವೇಶಿಸಿದ್ದರು. ತಳ ಭಾಗ ಪ್ರವೇಶಿಸಿದ ಬಳಿಕ ಅವರು ಅಡ್ಡಲಾಗಿ ಕೊರೆದಿದ್ದ ಸುರಂಗಕ್ಕೆ ತೆರಳಿದ್ದರು. ಸ್ಥಳೀಯವಾಗಿ ಅದನ್ನು “ರಾಟ್ ಹೋಲ್’ ಎಂದು ಕರೆಯುತ್ತಾರೆ. ಈ ಗಣಿಯ ಸಮೀಪದಲ್ಲಿಯೇ ಇರುವ ಲಿಟೆನ್ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಗಣಿಗೆ ನೀರು ನುಗ್ಗಿ, 15 ಮಂದಿ ಸಿಕ್ಕಿ ಹಾಕಿಕೊಂಡಿದ್ದರು. ಉಳಿದ ಐದು ಮಂದಿ ಮೇಲಕ್ಕೇರಿ ಬರುವಲ್ಲಿ ಯಶಸ್ವಿಯಾಗಿದ್ದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಷೇಧಿಸಿದರೂ ಅಕ್ರಮವಾಗಿ ಕೆಲಸಗಳು ನಡೆಯುತ್ತಿವೆ. ಕ್ವಾರಿಯಿಂದ ನೀರೆ ತ್ತಲು ಹೈ ಪವರ್ ಪಂಪ್ಗ್ಳ ಅಗತ್ಯವಿದೆ. ಆದರೆ ಮೇಘಾಲಯ ಸರ್ಕಾರದ ಬಳಿ ಅದು ಇಲ್ಲದಿರುವುದರಿಂದ ರಭಸದಿಂದ ನೀರೆತ್ತಲು ಅನಾನುಕೂಲವಾಗಿದೆ. ಸ್ಥಳೀಯ ರಿಗೆ ದುರ್ಘಟನೆ ಬಗ್ಗೆ ಮಾಹಿತಿ ಇಲ್ಲದ್ದರಿಂದ ಪೊಲೀಸರಿಗೆ ಕೂಡ ಸ್ಥಳ ಗುರುತಿಸಲು ಕೊಂಚ ವಿಳಂಬ ಆಗಿತ್ತು.
ಪ್ರಧಾನಿ ಕ್ರಮ ಕೈಗೊಳ್ಳಲಿ: ರಾಹುಲ್
ಗಣಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕ್ರಮಕೈಗೊಳ್ಳುವ ಬದಲು ಪ್ರಧಾನಿ ಮೋದಿ ಬೊಗಿಬೀಲ್ ಸೇತುವೆ ಉದ್ಘಾಟನೆ ನೆಪದಲ್ಲಿ ಫೋಟೊಧೀಗಳಿಗೆ ಪೋಸ್ ಕೊಡುತ್ತಿ ದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬುಧವಾರ ಟ್ವೀಟ್ ಮಾಡಿರುವ ಅವರು, ಕಾರ್ಮಿಕರ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾಗಿರುವ ಹೈಪ್ರಶರ್ ಪಂಪ್ಗ್ಳನ್ನು ನೀಡಲು ಕ್ರಮ ಕೈಗೊಳ್ಳಲಿ ಎಂದೂ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ