ಮೊಸಳೆ ಸ್ಮರಣಾರ್ಥ ದೇಗುಲ!
Team Udayavani, Jan 11, 2019, 12:30 AM IST
ರಾಯ್ಪುರ: ಜನಪ್ರಿಯ ಸಿನಿಮಾ ತಾರೆಯರು, ಖ್ಯಾತ ವ್ಯಕ್ತಿಗಳ ಸ್ಮರಣಾರ್ಥ ಅಭಿಮಾನಿಗಳು ದೇಗುಲ ನಿರ್ಮಿಸುತ್ತಾರೆ. ಗ್ರಾಮದಲ್ಲಿದ್ದ ಮೊಸಳೆ ನೆನಪಿಗಾಗಿ ದೇಗುಲ ನಿರ್ಮಿಸುವ ಉದ್ದೇಶ ಕತೆ ಇಲ್ಲಿದೆ. ಛತ್ತೀಸ್ಗಡದ ಬೆಮೆತಾರಾ ಜಿಲ್ಲೆಯ ಬಾವಾ ಮೊಹತಾರಾ ಗ್ರಾಮದಲ್ಲಿ ಶೀಘ್ರದಲ್ಲಿಯೇ ಅಂಥದ್ದು ನಿರ್ಮಾಣವಾಗಲಿದೆ. ಅಲ್ಲಿ 130 ವರ್ಷ ವಯಸ್ಸಿನದ್ದು ಎಂದು ನಂಬಲಾಗಿರುವ “ಗಂಗಾರಾಮ್’ ಎಂಬ ಮೊಸಳೆ ಅಸುನೀಗಿತ್ತು. ಸ್ಥಳೀಯರಿಗೆ ಅದು ದೇವರ ಸಮಾನವೇ ಆಗಿತ್ತು. ಅದರ ಅಂತ್ಯಕ್ರಿಯೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಗ್ರಾಮದ ಕೆರೆಯಲ್ಲಿ ಮಂಗಳವಾರ ಅಸುನೀಗಿತ್ತು. ಈ ಘಟನೆಯಿಂದ ದುಃಖೀತರಾಗಿದ್ದ ಗ್ರಾಮಸ್ಥರು ಒಂದು ದಿನ ಅಡುಗೆ ಮಾಡದೆ ಕುಳಿತಿದ್ದರು. ಗ್ರಾಮದ ಮುಖ್ಯಸ್ಥ ಮೋಹನ್ ಸಾಹು ಮಾತನಾಡಿ “ನಮ್ಮನ್ನು ಬಿಟ್ಟು ಅಗಲಿದ ಮೊಸಳೆ ಸ್ಮರಣಾರ್ಥ ದೇಗುಲ ನಿರ್ಮಿಸುವ ಇರಾದೆ ಇದೆ’ ಎಂದಿದ್ದಾರೆ. 3.4 ಮೀಟರ್ ಉದ್ದದ ಮೊಸಳೆ ಗ್ರಾಮದ ಕೆರೆಯಲ್ಲಿ 100 ವರ್ಷಗಳಿಂದಲೂ ಹೆಚ್ಚಿನ ಕಾಲ ಇತ್ತು. ಅವರ ಬಾಲ್ಯ ಕಾಲ ಮಾತ್ರವಲ್ಲ, ಅಜ್ಜ ಕೂಡ ಕೆರೆಯಲ್ಲಿ ಅದೇ ಮೊಸಳೆ ಇದ್ದ ಬಗ್ಗೆ ಹೇಳುತ್ತಿದ್ದ ಬಗ್ಗೆ ನೆನಪು ಇದೆ ಎಂದು ಸಾಹು ಹೇಳಿದ್ದಾರೆ. 250 ಕೆಜಿ ತೂಕ ಇದ್ದ ಆ ಮೊಸಳೆ ಕೆಲವೊಂದು ಬಾರಿ ಕೆರೆಯಿಂದ ಹೊರ ಬರುತ್ತಿತ್ತು. ಸ್ಥಳೀಯರೇ ಅದನ್ನು ಮತ್ತೆ ಅದರ ವಾಸಸ್ಥಾನಕ್ಕೆ ಹೊತ್ತೂಯ್ಯುತ್ತಿದ್ದರು. ಸ್ಥಳೀಯರ ಅಭಿಮಾನವನ್ನು ಬೆಮೆತಾರಾ ವಿಭಾಗದ ಅರಣ್ಯಾಧಿಕಾರಿ ಆರ್.ಕೆ.ಸಿನ್ಹಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಾನವ-ಪ್ರಾಣಿ ಸಹ ಜೀವನಕ್ಕೆ ಗ್ರಾಮಸ್ಥರು ಮಾದರಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ