ಹಠಾತ್ ಜಂಟಿ ದಾಳಿ ನಡೆಸಲು ಸಿಬಿಐಗೆ ಸಿವಿಸಿ ಸೂಚನೆ
Team Udayavani, Sep 8, 2017, 8:35 AM IST
ಹೊಸದಿಲ್ಲಿ: ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಮಾಹಿತಿ ದೊರೆತ ಕೂಡಲೆ ಸಿಬಿಐ, ಸಂಬಂಧಿಸಿದ ಜಾಗೃತ ಘಟಕದೊಂದಿಗೆ ಪರಿಶೀಲಿಸಿ, ದಿಢೀರ್ ಜಂಟಿ ದಾಳಿ ನಡೆಸಬಹುದು ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ) ತಿಳಿಸಿದೆ. ಗುರುವಾರ ಹೊರತಂದಿರುವ ನೂತನ ಜಾಗೃತ ಕೈಪಿಡಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ಭ್ರಷ್ಟಾಚಾರ ಕುರಿತು ಎಷ್ಟೇ ಅಧಿಕೃತ ಮಾಹಿತಿ ದೊರೆತರೂ ಅಂತಹ ಮಾಹಿತಿ ಕುರಿತು ಸೂಕ್ತ ಪರಿಶೀಲನೆ ನಡೆಸುವುದು ಸೂಕ್ತ ಎಂದಿರುವ ಸಿವಿಸಿ, ವಿಶ್ವಾಸಾರ್ಹ ಮಾಹಿತಿ ದೊರೆತರೆ ದಿಢೀರ್ ದಾಳಿ ನಡೆಸುವ ಬದಲು ನಿಯಮಬದ್ಧವಾಗಿ ಪ್ರಕರಣ ದಾಖಲಿಸುವುದು ಉತ್ತಮ ಎಂದು ಹೇಳಿದೆ.
ಇದೇ ವೇಳೆ, ಕೇಂದ್ರ ಜಾಗೃತ ಆಯುಕ್ತರು (ಸಿವಿಸಿ) ಹಾಗೂ ಜಾಗೃತ ಆಯುಕ್ತರ (ವಿಸಿ) ಹುದ್ದೆಗಳಿಗೆ ಪ್ರಾಮಾಣಿಕರನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿದೆ. ಅರ್ಜಿ ಸಲ್ಲಿಸಿದವರನ್ನು ಮಾತ್ರವೇಕೆ ಪರಿಗಣಿಸುತ್ತೀರಿ ಹಾಗೂ ಕಳಂಕಿತರನ್ನು ಇಂಥ ಮಹತ್ವದ ಹುದ್ದೆಗಳಿಗೆ ನೇಮಕ ಮಾಡುವುದು ಎಷ್ಟು ಸರಿ ಎಂದೂ ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ