ಸತ್ತ ದನದ ಚರ್ಮ ಸುಲಿದ ದಲಿತ ಅಮ್ಮ ಮಗನಿಗೆ ಥಳಿತ
Team Udayavani, Aug 16, 2017, 8:38 AM IST
ಅಹಮದಾಬಾದ್: ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತ ವ್ಯಕ್ತಿ ಮತ್ತು ಆತನ ತಾಯಿಯ ಮೇಲೆ ಮೇಲ್ವರ್ಗದ 15 ಜನರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಗುಜರಾತ್ನ ಆನಂದ್ ಜಿಲ್ಲೆಯ ಕಸೋರ್ನಲ್ಲಿ ನಡೆದಿದೆ.
ಗುಜರಾತ್ನ ಉನಾದಲ್ಲಿ ಸತ್ತ ದನದ ಚರ್ಮ ಸುಲಿ ಯುತ್ತಿದ್ದ ನಾಲ್ವರು ದಲಿತ ಯುವಕರನ್ನು ಗೋರಕ್ಷಕರೆಂದು ಕರೆಸಿಕೊಂಡವರು ವಾಹನಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ತೀವ್ರ ವಿವಾದ ಸೃಷ್ಟಿಸಿದ ಒಂದು ವರ್ಷದ ಬಳಿಕ ಅಂಥದ್ದೇ ಘಟನೆ ಮರುಕಳಿಸಿದೆ.
22 ವರ್ಷದ ಯುವಕ ಪಕ್ಕದ ಗ್ರಾಮದಿಂದ ಸತ್ತ ಹಸು ವನ್ನು ತಂದು ಹಳ್ಳಿಯ ಶ್ಮಶಾನದ ಬಳಿ ಅದರ ಚರ್ಮವನ್ನು ಸುಲಿಯುತ್ತಿದ್ದ. ಇದರಿಂದ ಕುಪಿತರಾದ ಮೇಲ್ವರ್ಗದ ಜನ, ರಾತ್ರಿ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ 45 ವರ್ಷದ ಅಮ್ಮ ಮತ್ತು ಮಗನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಯುವಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಜನರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.