ಇರುಮುಡಿ ಇಲ್ಲದೆ 18 ಮೆಟ್ಟಿಲು ಹತ್ತಿದ ಪ್ರಕರಣ ಹೈಕೋರ್ಟ್ಗೆ
Team Udayavani, Nov 8, 2018, 10:11 AM IST
ಕೊಚ್ಚಿ: ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯ ಕೆ.ಪಿ. ಶಂಕರದಾಸ್ರನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಮಂಡಳಿ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಎರ್ನಾಕುಳಂನಲ್ಲಿರುವ ಕೇರಳ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಶಂಕರ ದಾಸ್ ಅಯ್ಯಪ್ಪ ಸ್ವಾಮಿ ದೇಗುಲದ ಸಂಪ್ರದಾಯಗಳನ್ನು ಮೀರಿದ್ದಾರೆ ಎನ್ನುವುದು ಗೋಪಾಲಕೃಷ್ಣನ್ರ ಆರೋಪ. ದೇವಸ್ಥಾನದ ಸಂಪ್ರ ದಾಯದ ಪ್ರಕಾರ, ಇರುಮುಡಿ ಹೊತ್ತವರಿಗೆ ಮಾತ್ರ ದೇಗುಲದ 18 ಮೆಟ್ಟಿಲುಗಳನ್ನು ಏರಲು ಅವಕಾಶವಿರುತ್ತದೆ. ಆದರೆ, ಇದು ಗೊತ್ತಿದ್ದರೂ ನ.5ರಂದು ಪ್ರತಿಭಟನೆ ವೇಳೆ ಶಂಕರದಾಸ್ ಅವರು ಇರುಮುಡಿ ಇಲ್ಲದೆ ದೇಗುಲದ 18 ಪವಿತ್ರ ಮೆಟ್ಟಿಲುಗಳನ್ನೇರಿದ್ದರು. ಅದು ದೇಗುಲದ ಸಂಪ್ರದಾಯದ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯರು ದೇಗುಲ ಸಂಪ್ರದಾಯಗಳನ್ನು ಉಲ್ಲಂ ಸಿದಲ್ಲಿ ಅವರನ್ನು ವಜಾ ಮಾಡಲು ಅವಕಾಶ ಉಂಟು. ದಾಸ್ ಮತ್ತು ಇತರರು ಅದನ್ನು ಉಲ್ಲಂ ಸಿದ್ದರು ಎಂದು ಗೋಪಾಲಕೃಷ್ಣನ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದೇ ವೇಳೆ, 52 ವರ್ಷದ ಮಹಿಳಾ ಯಾತ್ರಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬುಧವಾರ ಪಟ್ಟಣಂತಿಟ್ಟದ ಎಲಂತೂರು ನಿವಾಸಿ ಸೂರಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ