ಜೇವಾರ್ ಏರ್ಪೋರ್ಟ್ಗೆ ಅಸ್ತು
Team Udayavani, Jun 25, 2017, 3:45 AM IST
ಶ್ರೀನಗರ: ದಿಲ್ಲಿ ವಿಮಾನ ನಿಲ್ದಾಣದಲ್ಲಿನ ವಿಪರೀತ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ದಿಲ್ಲಿಯ ಹೊರಗೆ ಸುಸಜ್ಜಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಅದರಂತೆ, ದಿಲ್ಲಿಯ ಹೊರಗೆ ಗ್ರೇಟರ್ ನೋಯ್ಡಾದ ಬಳಿ ಇರುವ ಜೇವಾರ್ನಲ್ಲಿ ಹೊಸ ವಿಮಾನ ನಿಲ್ದಾಣ ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಲೆ ಎತ್ತಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಶನಿವಾರ ಮಾಹಿತಿ ನೀಡಿದ್ದಾರೆ. ಜೇವಾರ್ನಲ್ಲಿ ಹೊಸ ಹಸಿರುಪಟ್ಟಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸರಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಇದಕ್ಕಾಗಿ ಯುಮುನಾ ಎಕ್ಸ್ ಪ್ರಸ್ ಹೆದ್ದಾರಿ ಪ್ರಾಧಿಕಾರ 3 ಸಾವಿರ ಎಕರೆ ಪ್ರದೇಶವನ್ನು ಗುರುತು ಮಾಡಿದೆ.
ವಾರ್ಷಿಕವಾಗಿ 30ರಿಂದ 50 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಈ ವಿಮಾನ ನಿಲ್ದಾಣಕ್ಕಿರಲಿದೆ. ಮುಂಬೈ ನಿಲ್ದಾಣಕ್ಕೆ ಇದು ರೂಪುಗೊಳ್ಳಲಿದೆ. ಒಟ್ಟಾರೆ ನಿಗದಿ ಮಾಡಿ ರುವ ಜಮೀನಿನಲ್ಲಿ ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, 2 ಸಾವಿರ ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯಲಿದೆ ಎಂದಿದ್ದಾರೆ ಸಚಿವರು.