ಲಂಡನ್ನಲ್ಲಿ ಚೆನ್ನೈ ಮೂಲದ ಯುವತಿ ಅಪಹರಣ: ಝಕೀರ್ಗೆ ಲಿಂಕ್?
Team Udayavani, Aug 26, 2020, 6:46 AM IST
ವಿವಾದಿತ ಇಸ್ಲಾಮಿಕ್ ವಿದ್ವಾಂಸ ಝಕೀರ್ ನಾಯ್ಕ್.
ಚೆನ್ನೈ: ಲಂಡನ್ನಲ್ಲಿ ಚೆನ್ನೈ ಮೂಲದ ಯುವತಿಯನ್ನು ಬಾಂಗ್ಲಾದೇಶದ ದುಷ್ಕರ್ಮಿಗಳು ಅಪಹರಣ ಮಾಡಿದ ಪ್ರಕರಣಕ್ಕೂ, ವಿವಾದಿತ ಇಸ್ಲಾಮಿಕ್ ವಿದ್ವಾಂಸ ಝಕೀರ್ ನಾಯ್ಕ್ ಗೂ ಸಂಬಂಧವಿದೆಯೇ?
ಈ ಅಪಹರಣದಲ್ಲಿ ಝಕೀರ್ ನಾಯ್ಕ ಜತೆ ನಂಟು ಹೊಂದಿರುವ ಬಾಂಗ್ಲಾದ ಸಂಘಟಿತ ಗ್ಯಾಂಗ್ವೊಂದರ ಪಾತ್ರವಿದೆ ಎಂಬ ಅನುಮಾನದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಆರಂಭಿಸಿದೆ.
ಕಳೆದ ಮೇ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿಯು ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರಿಯನ್ನು ಬಾಂಗ್ಲಾದೇಶೀಯರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು.
ಅಲ್ಲದೆ, ತಮ್ಮ ಪುತ್ರಿಯನ್ನು ತೀವ್ರಗಾಮಿತ್ವದ ಕಡೆಗೆ ಆಕರ್ಷಿತಳಾಗುವಂತೆ ಮಾಡಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯ ಪೂರ್ವಕವಾಗಿ ಮತಾಂತರಿಸಲಾಗಿದೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ಆರಂಭದಲ್ಲಿ ಚೆನ್ನೈ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿಕೊಂಡಿತ್ತು.
ಬಳಿಕ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು.
ಬಾಂಗ್ಲಾದ ಮಾಜಿ ಸಂಸದ ಸರ್ದಾರ್ ಶೇಖಾವತ್ ಹುಸೇನ್ ಬೊಕುಲ್ ಅವರ ಪುತ್ರ ನಾದ ನಫೀಸ್ನನ್ನು ಪ್ರಮುಖ ಆರೋಪಿ ಎಂದು ಎಫ್ಐಆರ್ನಲ್ಲಿ ಹೆಸರಿಸಲಾಗಿತ್ತು.
ಜತೆಗೆ, ಆರೋಪಿಗಳ ಪೈಕಿ ಝಕೀರ್ ನಾಯ್ಕ್ ಹೆಸರೂ ಇತ್ತು. ಇವರು ಪರಸ್ಪರ ನಂಟು ಹೊಂದಿದ್ದಾರೆಂಬ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ‘ಝೀ ನ್ಯೂಸ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು