ಅರಿವು ಮೂಡಿಸಲು ಬಂದವನನ್ನೇ ಕೊಂದರು
Team Udayavani, Jun 30, 2018, 6:00 AM IST
ಅಗರ್ತಲಾ: ಮಕ್ಕಳ ಕಳ್ಳರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುಳ್ಳು ಸಂದೇಶಗಳ ಬಗ್ಗೆ ಅರಿವು ಮೂಡಿಸಲು ನೇಮಿಸಲ್ಪಟ್ಟಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರನ್ನೇ ಮಕ್ಕಳ ಕಳ್ಳರೆಂದು ಅನುಮಾನಿಸಿ, ಅವರನ್ನೇ ಥಳಿಸಿ ಕೊಂದು ಹಾಕಿರುವ ಪ್ರಕರಣ ತ್ರಿಪುರಾದಲ್ಲಿ ನಡೆದಿದೆ.
ಸುಕಾಂತ ಚಕ್ರಬರ್ತಿ (33) ಮೃತ ದುರ್ದೈವಿ. ಸುಳ್ಳು ಸುದ್ದಿಗಳ ವ್ಯಾಪಕ ಹರಡುವಿಕೆಯಿಂದ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ತ್ರಿಪುರಾ ಸರ್ಕಾರ ತಂಡವೊಂದನ್ನು ನೇಮಿಸಿತ್ತು. ಸುಕಾಂತ ಅವರು ಆ ತಂಡದ ಸದಸ್ಯರಾಗಿದ್ದರು. ಸುಳ್ಳು ಸುದ್ದಿಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ದಕ್ಷಿಣ ತ್ರಿಪುರಾದ ಕಲಾಚ್ಚರಾಕ್ಕೆ ಅವರು ಭೇಟಿ ನೀಡಿದ್ದರು. ಆದರೆ ಅವರನ್ನೇ ಮಕ್ಕಳ ಕಳ್ಳನೆಂದು ಭಾವಿಸಿದ ಜನರು ಅವರನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಕೀಯ ತಿರುವು: ಘಟನೆ ಬಗ್ಗೆ ಖೇದ ವ್ಯಕ್ತ ಪಡಿಸಿರುವ ಮುಖ್ಯ ಮಂತ್ರಿ ಬಿಪ್ಲಬ್ ದೇವ್, ತ್ರಿಪುರಾದಲ್ಲಿ ಮಕ್ಕಳ ಕಳ್ಳರಿಲ್ಲವೆಂದು ಅಭಯ ನೀಡಿದ್ದಾರೆ. ಜತೆಗೆ, ಘಟನೆಗೆ ಸಿಪಿಎಂ ಕಾರಣವೆಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ