ಆದೇಶ ಧಿಕ್ಕರಿಸಿರುವ ಮದರಸಾ ಮೇಲೆ ಕ್ರಮ
Team Udayavani, Aug 17, 2017, 6:40 AM IST
ಲಕ್ನೋ: ಆಗಸ್ಟ್ 15ರ ಸ್ವಾತಂತ್ರೊತ್ಸವದಂದು ರಾಷ್ಟ್ರಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆ ಹಾಡದ ಮದ್ರಸಾಗಳ ವಿರುದ್ಧ ಕಠಿನ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರ ಮುಂದಾಗಿದೆ.
ಆದೇಶ ಉಲ್ಲಂ ಸಿದ ಮದ್ರಸಾಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಮತ್ತು ರಾಷ್ಟ್ರೀಯ ಗೌರವ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಬರೇಲಿ ವಿಭಾಗೀಯ ಕಮಿಷನರ್ ಡಾ| ಪಿ.ವಿ. ಜಗಮೋಹನ್ ಹೇಳಿದ್ದಾರೆ.
ಇತ್ತೀಚೆಗೆ ಸ್ವಾತಂತ್ರ್ಯ ದಿನದಂದು ಮದ್ರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು, ಧ್ವಜಾರೋಹಣವನ್ನು ಸರಕಾರ ಕಡ್ಡಾಯ ಗೊಳಿಸಿತ್ತು. ಜತೆಗೆ ಇಡೀ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ನಡೆಸುವಂತೆ ಹೇಳ ಲಾಗಿತ್ತು. ಸರಕಾರದ ಮೂಲಗಳ ಪ್ರಕಾರ 150 ಮದ್ರಸಾಗಳಲ್ಲಿ ಆದೇಶ ಪಾಲಿಸಲಾಗಿಲ್ಲ. ಈ ಬಗ್ಗೆ ವಿವಿಧೆಡೆಗಳಿಂದ ದೂರುಗಳು ಬಂದಿದ್ದಾಗಿ ಸರಕಾರದ ಮೂಲಗಳು ಹೇಳಿವೆ.
“ಆದೇಶ ಧಿಕ್ಕರಿಸಿದ್ದರ ವಿರುದ್ಧ ದೂರುಗಳಿವೆ. ದೂರು ನೀಡಿದವರು ಖಚಿತ ಸಾಕ್ಷ್ಯಗಳನ್ನು ನೀಡುವಂತೆ ಹೇಳಲಾಗಿದೆ. ಆದೇಶ ಧಿಕ್ಕರಿಸಿದ್ದು ಖಚಿತಪಟ್ಟರೆ ಅಂತಹ ಮದ್ರಸಾಗಳ ವಿರುದ್ಧ ಕೇಸು ದಾಖಲಿಸಲಾಗುವುದು’ ಎಂದು ಜಗಮೋಹನ್ ತಿಳಿಸಿದ್ದಾರೆ.
ಇನ್ನು ಸರಕಾರದ ಆದೇಶದ ವಿರುದ್ಧ ಬರೇಲಿಯ ಮುಸ್ಲಿಂ ಧಾರ್ಮಿಕ ಮುಖಂಡ ಕಾಝಿ ಮೌಲಾನಾ ರಾಜಾ ಖಾನ್ ಹೇಳಿಕೆ ನೀಡಿದ್ದು, ರಾಷ್ಟ್ರಗೀತೆ ಹಾಡುವುದು ಮುಸ್ಲಿಂ ವಿರೋಧಿ ಎಂದಿದ್ದರು. ದರ್ಗಾ ಅಲಾಹಝಾರತ್ ಕೂಡ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಹಾಡಬಾರದು ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ