ಕರು ಸತ್ತಿದ್ದಕ್ಕೆ ಒಡತಿಗೆ ವಾರ ಕಾಲ ಭಿಕ್ಷೆಯೆತ್ತುವ ಶಿಕ್ಷೆ!
Team Udayavani, Sep 3, 2017, 10:41 AM IST
ಭೋಪಾಲ: ಕರುವಿನ ಕೊರಳ ಹಗ್ಗ ಬಿಚ್ಚುವ ಸಮಯದಲ್ಲಿ ಅದು ಬಿಗಿದುಕೊಂಡು ಕರು ಮೃತಪಟ್ಟದ್ದಕ್ಕೆ ಅದರ ಒಡತಿಗೆ ಭಿಕ್ಷೆ ಬೇಡುವ ಶಿಕ್ಷೆ. ಇಂಥ ಅಮಾನವೀಯ ನಿರ್ಧಾರ ಪ್ರಕಟಿಸಿದ್ದು ಮಧ್ಯಪ್ರದೇಶದ ಭಿಂಡ್ ಪಟ್ಟಣದಲ್ಲಿ. ಅದೂ ಎಷ್ಟು ದಿನ ಗೊತ್ತೇ? ವಾರ ಕಾಲ. ಕೆಲ ದಿನಗಳ ಹಿಂದೆ ಮಹಿಳೆ ಕರುವಿನ ಕೊರಳ ಹಗ್ಗ ಬಿಚ್ಚುವ ಸಂದರ್ಭದಲ್ಲಿ ಅದು ಬಿಗಿದುಕೊಂಡು ಸಾವಿಗೀಡಾಗಿತ್ತು. ಅಚಾನಕ್ ಆಗಿ ನಡೆದು ಹೋದ ತಪ್ಪಿಗೆ ಗಂಗಾ ಸ್ನಾನಕ್ಕಾಗಿ ಬೇಕಾಗಿರುವ ಪುಣ್ಯದ ಹಣ ಸಂಗ್ರಹಿಸಲು ಸ್ಥಳೀಯ ಜಾತಿ ಪಂಚಾಯಿತಿ ಭಿಕ್ಷೆಯೆತ್ತುವ ಶಿಕ್ಷೆ ನೀಡಿ, ಬೀದಿ ಬೀದಿ ಅಲೆಸಿದೆ.
ಸುಮಾರು 50 ವರ್ಷ ವಯಸ್ಸಿನ ಈ ಮಹಿಳೆ ಉದ್ದೇಶ ಪೂರ್ವಕವಾಗಿ ಈ ಕೃತ್ಯವೆಸಗಿಲ್ಲ. ವಿನಾಯಿತಿ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾರೊಬ್ಬರು ಕಿವಿಗೆ ಹಾಕಿಕೊಳ್ಳದೆ ಶಿಕ್ಷೆ ವಿಧಿಸಲಾಯಿತು. ಈ ಬಗ್ಗೆ ಆಂಗ್ಲ ದಿನಪತ್ರಿಕೆಯೊಂದರ ಪತ್ರಕರ್ತರೊಬ್ಬರಿಗೆ ಫೋನ್ ಮಾಡಿ ಈ ವಿಚಾರ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯ ನಾಯಕರೊಬ್ಬರು ಕೂಡ ಶಿಕ್ಷೆಗೆ ಪ್ರತಿರೋಧ ಒಡ್ಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ