“ಮತಾಂತರದಲ್ಲಿ ಪಾತ್ರವಿಲ್ಲ’ ಘೋಷಣೆ ಇನ್ನು ಎನ್ಜಿಒ ಸದಸ್ಯರಿಗೆ ಕಡ್ಡಾಯ
Team Udayavani, Sep 18, 2019, 5:08 AM IST
ನವದೆಹಲಿ: ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವಂಥ ಎನ್ಜಿಒಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರಮುಖ ಸಿಬ್ಬಂದಿ, ತಾವು ಯಾವುದೇ ಧಾರ್ಮಿಕ ಮತಾಂತರ ಪ್ರಕರಣಗಳ ಆರೋಪ ಎದುರಿಸುತ್ತಿಲ್ಲ ಎಂದು ಸರ್ಕಾರದ ಮುಂದೆ ಘೋಷಿಸಿಕೊಳ್ಳುವುದು ಕಡ್ಡಾಯ.
ಅಷ್ಟೇ ಅಲ್ಲ, ಕೋಮುಗಲಭೆ ಸೃಷ್ಟಿಸಿರುವ ಅಥವಾ ಸಮಾಜದ ಶಾಂತಿಗೆ ಭಂಗ ತಂದಂಥ ಆರೋಪಗಳೂ ನಮ್ಮ ಮೇಲಿಲ್ಲ, ಅಂಥ ಪ್ರಕರಣಗಳಲ್ಲಿ ವಿಚಾರಣೆಯನ್ನೂ ಎದುರಿಸಿಲ್ಲ ಎಂದೂ ಅವರು ಪ್ರಮಾಣಪತ್ರ ಸಲ್ಲಿಸಬೇಕು. ಎನ್ಜಿಒಗಳ ವಿದೇಶಿ ದೇಣಿಗೆ ನಿಯಮಗಳಿಗೆ ಸಂಬಂಧಿಸಿದ ವಿದೇಶಿ ದೇಣಿಗೆ (ನಿಬಂಧನೆ)ನಿಯಮಗಳು, 2011ಕ್ಕೆ ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದ್ದು, ಅದರಂತೆ ಈ ಮೇಲಿನ ನಿಯಮಗಳು ಅನ್ವಯವಾಗಲಿದೆ. ಈ ಹಿಂದಿನ ನಿಯಮದ ಪ್ರಕಾರ, ವಿದೇಶಿ ದೇಣಿಗೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವವರು ಅಥವಾ ಆ ಎನ್ಜಿಒದ ನಿರ್ದೇಶಕರು ಮಾತ್ರವೇ ಇಂಥ ಘೋಷಣೆ ಮಾಡಬೇಕಿತ್ತು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು 5 ವರ್ಷಗಳಿಂದಲೂ ವಿದೇಶಿ ದೇಣಿಗೆ ಪಡೆಯುವ ಎನ್ಜಿಒಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುತ್ತಾ ಬಂದಿದೆ. ದೇಣಿಗೆ ನಿಯಮ ಉಲ್ಲಂ ಸಿರುವಂಥ ಸುಮಾರು 18 ಸಾವಿರ ಎನ್ಜಿಒಗಳಿಗೆ, ವಿದೇಶಿ ದೇಣಿಗೆ ಅನುಮತಿಯನ್ನೂ ಸರ್ಕಾರ ವಾಪಸ್ ಪಡೆದಿದೆ.
ಹೊಸ ನಿಯಮದಲ್ಲೇನಿದೆ?
ಒಂದು ಲಕ್ಷ ರೂ.ವರೆಗಿನ ಮೌಲ್ಯದ ವೈಯಕ್ತಿಕ ಉಡುಗೊರೆ ಪಡೆಯುವಂಥ ವ್ಯಕ್ತಿಗಳು ಅದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕಾದ ಅಗತ್ಯವಿಲ್ಲ. ಹಿಂದೆ ಇದಕ್ಕೆ 25 ಸಾವಿರ ರೂ.ಗಳ ಮಿತಿ ಇತ್ತು.
ಎನ್ಜಿಒ ಸದಸ್ಯರು ಮತ್ತು ಪದಾಧಿಕಾರಿಗಳು ಕಡ್ಡಾಯವಾಗಿ ತಾವು ಮತಾಂತರ, ಕೋಮುಪ್ರಚೋದನೆಯಂಥ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ದೃಢಪಡಿಸುವಂಥ ದಾಖಲೆಗಳನ್ನು ಗೃಹ ಇಲಾಖೆಗೆ ಸಲ್ಲಿಸಬೇಕು.
ವಿದೇಶಿ ದೇಣಿಗೆಯನ್ನು ಬೇರೆಡೆಗೆ ವರ್ಗಾಯಿಸುವ, ದೇಶದ್ರೋಹಕ್ಕೆ ಪ್ರಚಾರ ಕೊಡುವ ಅಥವಾ ಹಿಂಸೆಗೆ ಪ್ರಚೋದಿಸುವಂಥ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ಸಂಸ್ಥೆಯ ಎಲ್ಲ ಸದಸ್ಯರೂ ಅಫಿಡವಿಟ್ ಸಲ್ಲಿಸಬೇಕು.
ವಿದೇಶ ಪ್ರವಾಸದ ವೇಳೆ ಎನ್ಜಿಒ ಸದಸ್ಯನಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ, ಆಸ್ಪತ್ರೆಗೆ ದಾಖಲಾದ ವಿವರವನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?