ರಾಜ್ಯದ ಮೂವರಿಗೆ ಬಾಲ, ಯುವ ಸಾಹಿತ್ಯ ಅಕಾಡೆಮಿ ಪುರಸ್ಕಾರ
Team Udayavani, Jun 15, 2019, 3:05 AM IST
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಕರ್ನಾಟಕದ ಮೂವರು ಸೇರಿ ಒಟ್ಟು 45 ಸಾಹಿತಿಗಳಿಗೆ ಬಾಲ ಹಾಗೂ ಯುವ ಪುರಸ್ಕಾರವನ್ನು ಘೋಷಿಸಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ನೇತೃತ್ವದಲ್ಲಿನ ಸಮಿತಿಯು ಅಗರ್ತಲಾದಲ್ಲಿ ಪುರಸ್ಕೃತರನ್ನು ಘೋಷಿಸಿದೆ.
ಬೇರು ಕಾದಂಬರಿಗಾಗಿ ಶ್ರೀಧರ ಬನವಾಸಿ ಜಿ.ಸಿ ಅವರಿಗೆ ಯುವ ಪುರಸ್ಕಾರ ಲಭಿಸಿದೆ. ಬಾಲ ಸಾಹಿತ್ಯ ಪುರಸ್ಕಾರವನ್ನು “ಕಾಡು ಕನಸಿನ ಬೀದಿಗೆ’ ಕಾದಂಬರಿಗಾಗಿ ಚಂದ್ರಕಾಂತ ಕರದಳ್ಳಿ ಅವರಿಗೆ ನೀಡಲಾಗಿದೆ. ಅಲ್ಲದೆ ಇಂಗ್ಲಿಷ್ ವಿಭಾಗದಲ್ಲಿ ಕರ್ನಾಟಕದ ದೇವಿಕಾ ಕಾರಿಯಪ್ಪ ಅವರಿಗೆ ಪುರಸ್ಕಾರ ಲಭಿಸಿದೆ.
ಇವರ ಇಂಡಿಯಾ ಥ್ರೂ ಆರ್ಕಿಯಾಲಜಿ: ಎಕ್ಸ್ಕವೇಟಿಂಗ್ ಹಿಸ್ಟರಿ ಎಂಬ ಇತಿಹಾಸ ಕೃತಿಗೆ ಪುರಸ್ಕರಿಸಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬಾಲ ಸಾಹಿತ್ಯ ಪುರಸ್ಕಾರವನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ