ವಕೀಲರ ಸಮ್ಮುಖದಲ್ಲೇ ಆದೇಶ ಎಂದ ಸುಪ್ರೀಂ ಕೋರ್ಟ್
Team Udayavani, Jul 25, 2019, 3:05 AM IST
ನವದೆಹಲಿ: ಕೂಡಲೇ ವಿಶ್ವಾಸಮತ ಸಾಬೀತಿಗೆ ಸ್ಪೀಕರ್ ರಮೇಶ್ಕುಮಾರ್ಗೆ ಆದೇಶಿಸಬೇಕೆಂದು ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಅವಕಾಶ ನೀಡುವಂತೆ ಬುಧವಾರ ಸುಪ್ರೀಂ ಕೋರ್ಟ್ಗೆ ಪಕ್ಷೇತರ ಶಾಸಕರಿಬ್ಬರು ಮನವಿ ಮಾಡಿದ್ದಾರೆ. ಮಂಗಳವಾರವೇ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿರುವ ಕಾರಣ, ಅರ್ಜಿ ವಾಪಸ್ ಪಡೆಯುತ್ತಿರುವುದಾಗಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಪರ ವಕೀಲರು ಕೋರಿಕೊಂಡರು.
ಆದರೆ, ಬುಧವಾರದ ವಿಚಾರಣೆ ವೇಳೆ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಮುಕುಲ್ ರೋಹಟಗಿ ಇಬ್ಬರೂ ಗೈರಾಗಿದ್ದರು. ಅವರ ಗೈರುಹಾಜರಿ ಕುರಿತು ಪ್ರಶ್ನಿಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ, “ಮುಕುಲ್ ರೋಹಟಗಿ ಅವರೆಲ್ಲಿ? ಎ.ಎಂ.ಸಿಂಘ್ವಿ ಅವರೆಲ್ಲಿ? ಈ ಪ್ರಕರಣದಲ್ಲಿ ವಾದ ಮಂಡಿಸಲು ಈ ಇಬ್ಬರು ಹಿರಿಯ ವಕೀಲರೂ ಕೋರ್ಟ್ನ ಸಾಕಷ್ಟು ಸಮಯವನ್ನು ವ್ಯಯಿಸಿದ್ದಾರೆ. ಹಾಗಾಗಿ ನಾವು ಏನೇ ಆದೇಶ ನೀಡುವುದಿದ್ದರೂ ಅವರ ಸಮ್ಮುಖದಲ್ಲೇ ನೀಡುತ್ತೇವೆ’ ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್