“ಕೋಮು ಸೌಹಾರ್ದಕ್ಕೆ ಧಕ್ಕೆ’ ಅಂಶ ಪ್ರಸ್ತಾವಿಸಿಲ್ಲ
Team Udayavani, Oct 2, 2019, 4:33 AM IST
ಹೊಸದಿಲ್ಲಿ: ಜಮೀನು ಮಾಲಕತ್ವ ವಿಚಾರಣೆ ವೇಳೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಯಾವುದೇ ಅಂಶ ಕೋರ್ಟ್ಗೆ ಸಲ್ಲಿಸಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಮಂಗಳವಾರ ಸುಪ್ರೀಂಕೋರ್ಟ್ಗೆ ಅರಿಕೆ ಮಾಡಿಕೊಂಡಿವೆ. ಆದರೆ ಪ್ರತಿವಾದಿಗಳು ಮಾಡಿದ ವಾದವು ಕೋಮು ಭಾವನೆ ಕೆರಳಿಸುವಂತೆ ಇದ್ದವು ಎಂದು ರಾಮಲಲ್ಲಾ ಪರ ನ್ಯಾಯವಾದಿ ಸಿ.ಎಸ್.ವೈದ್ಯನಾಥನ್ ಆರೋಪಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ 35ನೇ ದಿನ ನಡೆದ ವಿಚಾರಣೆ ವೇಳೆ ಈ ಅಂಶ ಪ್ರಸ್ತಾಪವಾಗಿದೆ. ಮುಸ್ಲಿಂ ಪರ ಸಂಘಟನೆಗಳ ಪರ ವಕೀಲರು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ವರದಿಯನ್ನೇ ಪ್ರಶ್ನೆ ಮಾಡಿದರು. ಮೊಘಲರ ದೊರೆ ಬಾಬರ್ ಈದ್ಗಾವನ್ನು ನಾಶಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಎಂದಿದ್ದರು. ಜತೆಗೆ ಖಾಲಿ ಜಮೀನಿನ ಮೇಲೆ ಮಸೀದಿ ನಿರ್ಮಿಸಲಾಗಿತ್ತು ಎಂಬ ತದ್ವಿರುದ್ಧ ವಾದ ಮಂಡಿಸಿದ್ದರು ಎಂದು ವೈದ್ಯನಾಥನ್ ವ್ಯಾಖ್ಯಾನಿಸಿದ್ದಾರೆ. ರಾಮ ಲಲ್ಲಾ ಪರ ವಕೀಲರ ಈ ವಾದ ಮುಸ್ಲಿಂ ಸಂಘಟನೆಗಳ ಪರ ನ್ಯಾಯವಾದಿ ರಾಜೀವ್ ಧವನ್ ಮತ್ತು ಇತರ ಸಂಘಟನೆಗಳ ಪರ ನ್ಯಾಯವಾದಿಗಳಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಯಿತು. ಕೋಮು ಭಾವನೆಗೆ ಧಕ್ಕೆಯಾಗುವ ಯಾವುದೇ ಅಂಶಗಳನ್ನು ವಾದದಲ್ಲಿ ಮಂಡಿಸಿಲ್ಲ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ