ಕಳ್ಳತನಕ್ಕೆಂದು ಕೊರೆದಿದ್ದ ಕಂಡಿಯಲ್ಲೇ ಸಿಕ್ಕಿಬಿದ್ದ ಕಳ್ಳ!
Team Udayavani, Apr 7, 2022, 8:00 AM IST
ಆಂಧ್ರಪ್ರದೇಶ: ಕರ್ಮ ಯಾರನ್ನೂ ಬಿಡುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿಯ ದೃಶ್ಯವೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಶ್ರೀಕಾಕುಲಂನ ಜಾಮಿ ಯೆಲ್ಲಮ್ಮ ದೇಗುಲದಲ್ಲಿ ಕಳ್ಳತನ ಮಾಡಲೆಂದು ಪಾಪಾ ರಾವ್ (30) ಹೆಸರಿನ ಕಳ್ಳ ಪ್ರಯತ್ನಿಸಿದ್ದಾನೆ.
ದೇಗುಲದ ಹಿಂಭಾಗದಲ್ಲಿದ್ದ ಕಿಟಕಿಯನ್ನು ಒಡೆದು ಅದರ ಮೂಲಕ ಆತ ದೇಗುಲದೊಳಗೆ ನುಗ್ಗಿದ್ದಾನೆ.
ಇದನ್ನೂ ಓದಿ:ಹುಟ್ಟಿದ ಕೂಡಲೇ ಅಪಹರಣವಾಗಿದ್ದ ಮಗು 22 ದಿನಗಳ ನಂತರ ತಾಯಿ ಮಡಿಲಿಗೆ
ದೇವರ ಆಭರಣಗಳನ್ನೆಲ್ಲ ದೋಚಿಕೊಂಡು ಅದೇ ಕಂಡಿಯ ಮೂಲಕ ಹೊರ ಹೋಗಲು ಯತ್ನಿಸಿದ್ದಾನೆ. ಕಂಡಿ ಚಿಕ್ಕದಿದ್ದ ಹಿನ್ನೆಲೆ ಅರ್ಧ ಹೊರಹೋಗುವಷ್ಟರಲ್ಲಿ ಸಿಕ್ಕಿಬಿದ್ದಿದ್ದಾನೆ. ನಂತರ ಕೂಗಿ ಸಹಾಯ ಕೇಳಲಾರಂಭಿಸಿದ್ದಾನೆ. ಕೂಗನ್ನು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು, ಆತನನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.