ಭಾರತ್ ಮಾತಾ ಕೀ ಜೈ, ಜೈಶ್ರೀರಾಮ್ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದು ಯಾರು? ಪ್ರಧಾನಿ
ಈ ನೆಲದಲ್ಲಿ ಜನರು ದೇಶಕ್ಕಾಗಿ ಘೋಷಣೆ ಕೂಗದಿರಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
Team Udayavani, Nov 3, 2020, 3:30 PM IST
ಪಾಟ್ನಾ:ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಘೋಷಣೆ ಕೂಗುವುದನ್ನು ಯಾರು ವಿರೋಧಿಸುತ್ತಿದ್ದಾರೆಯೋ ಅವರೇ ಈಗ ನಿಮ್ಮ ಬಳಿ ಬಂದು ಮತ ಚಲಾಯಿಸಿ ಎಂದು ಕೇಳುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರ ಎನ್ ಡಿಎ ಮೈತ್ರಿಕೂಟವನ್ನು ಮರು ಆಯ್ಕೆ ಮಾಡಲು ಮುಂದಾಗಿರುವುದಾಗಿ ಪ್ರಧಾನಿ ಮೋದಿ ಅವರು ಮಂಗಳವಾರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು. ಬಿಹಾರ ವಿಧಾನಸಭೆ 243 ಸದಸ್ಯ ಬಲ ಹೊಂದಿದ್ದು, 2ನೇ ಹಂತದ ಚುನಾವಣೆಯಲ್ಲಿ 94 ಕ್ಷೇತ್ರಗಳಿಗೆ (ನವೆಂಬರ್ 03) ಮತದಾನ ನಡೆಯುತ್ತಿದೆ. ಬಿಹಾರದ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆ ನವೆಂಬರ್ 7ರಂದು ನಡೆಯಲಿದೆ.
ಬಿಹಾರ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ನಮಗೆ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಬಿಹಾರ ಮತ್ತೊಮ್ಮೆ ಎನ್ ಡಿಎ ಸರ್ಕಾರವನ್ನು ಪುನರಾಯ್ಕೆ ಮಾಡಲು ಮುಂದಾಗಿದೆ ಎಂಬುದಾಗಿ. ರಾಜ್ಯವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಮತದಾರರು ನಿರ್ಧರಿಸಿರುವುದಾಗಿ ಹೇಳಿದರು.
ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಸಂಜನಾ- ರಾಗಿಣಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಆರ್ ಜೆಡಿ ನೇತೃತ್ವದ ಮಹಾಮೈತ್ರಿ ಕೂಟದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ ಅವರು, ಬಿಹಾರದಲ್ಲಿ ಯಾರು (ಆರ್ ಜೆಡಿ) ಜಂಗಲ್ ರಾಜ್ ಆಡಳಿತ ನಡೆಸಿದ್ದಾರೋ ಅವರ ಮೈತ್ರಿ ಪಕ್ಷಗಳಿಗೆ ಏನು ಬೇಕಾಗಿದೆ ಗೊತ್ತಾ? ಅವರಿಗೆ ನೀವು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬಾರದು. ಇಂತಹ ಪವಿತ್ರ ಭೂಮಿಯಲ್ಲಿ ದೇವಿಯನ್ನು ಆರಾಧಿಸುವ ಈ ನೆಲದಲ್ಲಿ ಜನರು ದೇಶಕ್ಕಾಗಿ ಘೋಷಣೆ ಕೂಗದಿರಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಮಹಾಘಟಬಂಧನ್ ಕೂಟದ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಹೇಳುತ್ತವೆ. ಇದರಲ್ಲಿ ಒಂದು ಪಕ್ಷ ಭಾರತ್ ಮಾತಾ ಕೀ ಜೈ ಎಂದು ಘೋಷಿಸಬೇಡಿ ಎನ್ನುತ್ತದೆ. ಮತ್ತೊಂದು ಪಕ್ಷಕ್ಕೆ ಜೈ ಶ್ರೀರಾಮ್ ಘೋಷಣೆ ಕೂಗಬಾರದು. ಈಗ ಮೈತ್ರಿಯೊಂದಿಗೆ ಬಿಹಾರ ಜನರಲ್ಲಿ ಮತಯಾಚನೆಗೆ ಆಗಮಿಸಿರುವುದಾಗಿ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ