ಜಲ್ಲಿಕಟ್ಟು: ಚೆನ್ನೈ ಮರೀನಾ ಬೀಚಲ್ಲಿ ಸಹಸ್ರಾರು ಜನರಿಂದ ಪ್ರತಿಭಟನೆ
Team Udayavani, Jan 18, 2017, 11:12 AM IST
ಚೆನ್ನೈ : ಇಲ್ಲಿನ ಮರೀನಾ ಬೀಚ್ನಲ್ಲಿ ಜಲ್ಲಿಕಟ್ಟು ನಿಷೇಧದ ತೆರವಿಗೆ ಯುವಕರ ಒಂದು ಸಣ್ಣ ಗುಂಪು ಆರಂಭಿಸಿದ್ದ ಪ್ರತಿಭಟನೆಯು ಇದೀಗ ಬೃಹತ್ ರೂಪ ತಳೆದಿದ್ದು ಸಹಸ್ರಾರು ಜನರು ಇದನ್ನು ಸೇರಿಕೊಂಡಿದ್ದಾರೆ.
ಜಲ್ಲಿಕಟ್ಟು ಆಂದೋಲನವು ಈಗ ತಮಿಳರ ಸಾಂಸ್ಕೃತಿಕ ಸ್ವಾಭಿಮಾನವಾಗಿ ಪರಿವರ್ತಿತವಾಗಿದ್ದು ಪೊಂಗಲ್ ಸಂದರ್ಭದಲ್ಲಿ ನಡೆಯುವ ಈ ಸಾಂಪ್ರದಾಯಿಕ ಕ್ರೀಡೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಸರಕಾರದ ಮೇಲಿನ ಒತ್ತಡವು ಹೆಚ್ಚುತ್ತಿದೆ.
ಮರೀನಾ ಬೀಚ್ನಲ್ಲಿ ನಡೆದಿರುವ ಜಲ್ಲಿಕಟ್ಟು ಪ್ರತಿಭಟನೆಗೆ ಯಾವುದೇ ನಿರ್ದಿಷ್ಟ ನಾಯಕನಿಲ್ಲ. ಹಾಗಿದ್ದರೂ ಜನರು ಈ ಪ್ರತಿಭಟನಾ ತಾಣದಿಂದ ಹಿಂದೆ ಸರಿಯುತ್ತಿಲ್ಲ. ಪರಿಣಾಮವಾಗಿ ತಮಿಳು ನಾಡು ಸರಕಾರ ಈಗ ಕೇಂದ್ರವನ್ನು ಸಂಪರ್ಕಿಸಿದ್ದು ಪ್ರತಿಭಟನೆಯ ಕಾವನ್ನು ಶಮನಗೊಳಿಸುವುದಕ್ಕೆ ನೆರವಾಗುವಂತೆ ಕೋರಿದೆ.
ಇದೇ ವೇಳೆ ತಮಿಳು ನಾಡು ಸರಕಾರ ಪ್ರತಿಭಟನಕಾರರನ್ನು ಕೂಡ ಸಂಪರ್ಕಿಸಿದ್ದು ಜಲ್ಲಿಕಟ್ಟು ಮೇಲಿನ ನಿಷೇಧದ ತೆರವಿಗೆ ಮತ್ತು ಅಧ್ಯಾದೇಶದ ಜಾರಿಗೆ ತಾನು ಅವಶ್ಯವಿದ್ದಲ್ಲಿ ರಾಷ್ಟ್ರಪತಿಯವರನ್ನು ಕೂಡ ಸಂಪರ್ಕಿಸುವುದಾಗಿ ಭರವಸೆ ನೀಡಿದೆ.
ರಾಜ್ಯ ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಕೆ ಪಾಂಡ್ಯರಾಜನ್ ಅವರೊಂದಿಗೆ ಮರೀನಾ ಬೀಚ್ನಲ್ಲಿ ಪ್ರತಿಭಟನೆ ನಿರತ ಯುವಕರ ಜತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಪ್ರತಿಭಟನಕಾರರು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರಿಂದ ನಿಖರ ಆಶ್ವಾಸನೆ ಸಿಗದೆ ತಾವು ಸ್ಥಳದಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಸರಕಾರ ಈ ಸಂಬಂಧ ತಾನು ಯಾವುದೇ ಮೌಖೀಕ ಭರವಸೆ ನೀಡುವುದಿಲ್ಲ; ಆದರೆ ದಿನಾಂತ್ಯದ ಒಳಗೆ ಮುಖ್ಯಮಂತ್ರಿಗಳಿಂದ ಈ ಸಂಬಂಧ ಹೇಳಿಕೆಯನ್ನು ಹೊರಡಿಸುವುದಾಗಿ ಪ್ರತಿಭಟನಕಾರರಿಗೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್