ಜಲ ಸಂರಕ್ಷಣೆಗೆ ಮೂರು ಮನವಿ
ಮನ್ ಕಿ ಬಾತ್ 2ರಲ್ಲಿ ಪ್ರಧಾನಿ ಮೋದಿ
Team Udayavani, Jul 1, 2019, 6:00 AM IST
ನವದೆಹಲಿ: ‘ಸ್ಪರ್ಶ ಮಾತ್ರದಿಂದಲೇ ಬದುಕನ್ನು ಬದಲಿಸಬಲ್ಲ ಪಾರಸ್ ಮಣಿಯಂಥ ಶಕ್ತಿಯನ್ನು ನೀರು ಹೊಂದಿದ್ದು, ಅದನ್ನು ಸಂರಕ್ಷಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ’ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಜಲ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಮೂರು ಮನವಿಗಳನ್ನು ಮಾಡಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾದ ನಂತರ ತಮ್ಮ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕೀ ಬಾತ್’ ಅನ್ನು ಪುನರಾರಂಭಿಸಿರುವ ಅವರು, ಭಾನುವಾರ 2ನೇ ಸರಣಿಯ ಮೊದಲ ಕಂತಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಗುರವಾಗಿ ಪರಿಗಣಿಸದಿರಿ: 1975ರಲ್ಲಿ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಗೆ ಇದೇ ಜೂ. 24ಕ್ಕೆ 44 ವರ್ಷಗಳು ಸಂದ ಹಿನ್ನೆಲೆಯಲ್ಲಿ ಪ್ರಧಾನಿ, ಆ ವಿಚಾರವನ್ನೂ ಉಲ್ಲೇಖೀಸಿ, ತುರ್ತು ಪರಿಸ್ಥಿತಿಗೆ ಕಾರಣರಾದವರು ಪ್ರಜಾಪ್ರಭುತ್ವವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು. ”ಹಾಗೆಯೇ, ನಮ್ಮಲ್ಲಿರುವ ಅನೇಕ ಸೌಕರ್ಯಗಳ ಮಹತ್ವ ಅವು ನಮ್ಮ ಜತೆಗಿರುವವರೆಗೆ ನಮಗೆ ತಿಳಿಯುವುದಿಲ್ಲ. ಯಾರಾದರೂ ಅವನ್ನು ಅಪಹರಿಸಿದಾಗ ಅಥವಾ ಕಿತ್ತುಕೊಂಡಾಗ ಮಾತ್ರ ಅವುಗಳ ಮಹತ್ವ ನಮಗೆ ತಿಳಿಯುತ್ತದೆ” ಎಂದ ಅವರು, ”ತುರ್ತು ಪರಿಸ್ಥಿತಿ ವೇಳೆಯಲ್ಲೂ ಜನರಿಗೆ ತಮಗೆ ಹತ್ತಿರವಾದ ಕೆಲವು ವಿಚಾರ, ಸ್ವಾತಂತ್ರ್ಯಗಳನ್ನು ಯಾರೋ ಅಪಹರಿಸಿದರು ಎಂಬ ಭಾವನೆ ನೆಲೆಸಿತು. ಹಾಗಾಗಿಯೇ 1977ರ ಮಹಾಚುನಾವಣೆಯಲ್ಲಿ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿಯೇ ಮತ ಹಾಕಿದರು. ದೇಶದ ಇತಿಹಾಸದಲ್ಲಿ ಅದೊಂದು ಮಹತ್ವದ ಚುನಾವಣೆ” ಎಂದು ಮೋದಿ ಅಭಿಪ್ರಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್