ಕಣಿವೆಯಲ್ಲಿ ಉಗ್ರರ ಅಟ್ಟಹಾಸ : ಕಾಶ್ಮೀರದಲ್ಲಿ ಮೂವರನ್ನು ಕೊಂದ ಪಾಪಿಗಳು
Team Udayavani, Oct 6, 2021, 8:37 AM IST
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಹೇಯ ಕೃತ್ಯ ಮೆರೆದಿದ್ದಾರೆ. ಉಗ್ರರ ಕೆಂಗಣ್ಣಿಗೆ ಮೂವರು ನಾಗರಿಕರನ್ನು ಹತ್ಯೆಯಾಗಿದ್ದಾರೆ.
ಉಗ್ರರು ನಡೆಸಿದ ಗುಂಡಿನ ದಾಳಿಗೆ ಮಖನ್ ಔಷಧಾಲಯದಲ್ಲಿದ್ದ ಒಬ್ಬರನ್ನು ಸೇರಿ ಇಬ್ಬರು ಬೀದಿ ಬದಿ ವ್ಯಾಪಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉಗ್ರರು ಶ್ರೀನಗರದ ಹವಾಲ್ ಮದಿನ್ ಸಾಹಿಬ್ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ರಕ್ಷಣಾಪಡೆಗಳು ದಾಳಿಕೋರರಿಗಗಿ ಕಾರ್ಯಾಚರಣೆ ನಡೆಸುತ್ತಿವೆ.
ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತ ಮಖನ್ ಲಾಲ್ ಬಿಂದ್ರೋ ಎಂಬುವವರ ಮೇಲೆ ಗುಂಡಿನ ದಾಳಿ ಮಾಡಿ ಕೊಲ್ಲಲಾಗಿದೆ. ನಂತರ ಮದಿನಾ ಚೌಕ್ ಲಾಲ್ ಬಜಾರ್ನ ವೆಂದೂರ್ ನಲ್ಲಿನ ನಾಗರಿಕ ವಿರೇಂದ್ರ ಪಾಸ್ವಾನ್ ಎಂಬುವವರನ್ನೂ ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.