ಪಾಕ್ ಒಳಗೇ ದಾಳಿ ಮಾಡುವ ಕಾಲ ಈಗ ಒದಗಿದೆ: ಉದ್ಧವ್ ಠಾಕ್ರೆ
Team Udayavani, Feb 15, 2019, 1:54 PM IST
ಮುಂಬಯಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯಿಂದ ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲೀಗ ಪಾಕಿಸ್ಥಾನದ ಒಳಗೆ ನುಗ್ಗಿ ದಾಳಿ ನಡೆಸುವ ಕಾಲ ಒದಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಒಂದು ವೇಳೆ ಸಿಆರ್ಪಿಎಫ್ ಯೋಧರ ಮೇಲಿನ ಉಗ್ರ ದಾಳಿಯು ಗುಪ್ತಚರ ವೈಫಲ್ಯದಿಂದ ಆಗಿದ್ದಲ್ಲಿ ಅದರ ಹೊಣೆಗಾರಿಕೆ ಇದ್ದವರನ್ನು ಕಿತ್ತು ಹಾಕಬೇಕು ಎಂದು ಠಾಕ್ರೆ ಹೇಳಿದರು.
2016ರ ಸರ್ಜಿಕಲ್ ದಾಳಿಯ ಬಳಿಕ ಈಗ ಪಾಕಿಸ್ಥಾನದ ಒಳಗೇ ದಾಳಿ ನಡೆಸುವ ಕಾಲ ಒದಗಿ ಬಂದಿದೆ ಎಂದು ಠಾಕ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.