ತಿರುಚ್ಚಿ – ಹುಬ್ಬಳ್ಳಿ ಏರ್ಪೋರ್ಟ್ ವಿಲೀನ?
7 ಸಣ್ಣ ವಿಮಾನ ನಿಲ್ದಾಣಗಳನ್ನು 6 ದೊಡ್ಡದರ ಜೊತೆ ವಿಲೀನಗೊಳಿಸಲು ಚಿಂತನೆ
Team Udayavani, Oct 27, 2021, 9:00 AM IST
ನವದೆಹಲಿ: ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಯ ನಡುವೆಯೇ ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ದೇಶದ 7 ಸಣ್ಣ ಏರ್ಪೋರ್ಟ್ಗಳನ್ನು 6 ದೊಡ್ಡ ವಿಮಾನನಿಲ್ದಾಣಗಳೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಅದರಂತೆ, ವಾರಾಣಸಿ ವಿಮಾನನಿಲ್ದಾಣದೊಂದಿಗೆ ಖುಶಿ ನಗರ ಮತ್ತು ಗಯಾ ಏರ್ಪೋರ್ಟ್, ಅಮೃತಸರದೊಂದಿಗೆ ಕಾಂಗ್ರಾ, ಭುವನೇಶ್ವರದೊಂದಿಗೆ ತಿರುಪತಿ, ರಾಯ್ಪುರದೊಂದಿಗೆ ಔರಂಗಾಬಾದ್, ಇಂದೋರ್ನೊಂದಿಗೆ ಜಬಲ್ಪುರ ಮತ್ತು ತಿರುಚ್ಚಿಯೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ವಿಲೀನಗೊಳಿಸಲಾಗುತ್ತದೆ.
ಇದಲ್ಲದೇ, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ವಯ ಮುಂದಿನ 4 ವರ್ಷಗಳಲ್ಲಿ 25 ಏರ್ಪೋರ್ಟ್ಗಳನ್ನು ಖಾಸಗಿಗೆ ವಹಿಸುವ ಗುರಿಯನ್ನೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ(ಎಎಐ) ಹಾಕಿಕೊಂಡಿದೆ.
ಮಾರ್ಚ್ನೊಳಗೆ ಪ್ರಕ್ರಿಯೆ ಪೂರ್ಣ:
ಇದೇ ವೇಳೆ, ಮುಂದಿನ ವರ್ಷದ ಮಾರ್ಚ್ ವೇಳೆಗೆ ದೇಶದ 13 ವಿಮಾನನಿಲ್ದಾಣಗಳ ಖಾಸಗೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಬಿಡ್ಡಿಂಗ್ ಮಾಡಲು 13 ಏರ್ಪೋರ್ಟ್ಗಳ ಪಟ್ಟಿಯನ್ನು ಈಗಾಗಲೇ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲೇ ಬಿಡ್ಡಿಂಗ್ ಪೂರ್ಣಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯಸ್ಥ ಸಂಜೀವ್ ಕುಮಾರ್ ತಿಳಿಸಿದ್ದಾರೆ ಎಂದು “ದ ಇಕನಾಮಿಕ್ ಟೈಮ್ಸ್’ವರದಿ ಮಾಡಿದೆ.
ಇದನ್ನೂ ಓದಿ:1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK
ಪ್ರಯಾಣಿಕನಿಂದ ಬರುವ ತಲಾ ಆದಾಯದ ಮಾದರಿಯನ್ನು ಬಿಡ್ಡಿಂಗ್ಗೆ ಅನುಸರಿಸಲಾಗುತ್ತದೆ. ಈ ಮಾದರಿಯನ್ನು ಈ ಹಿಂದೆಯೂ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಜೇವಾರ್ ಏರ್ಪೋರ್ಟ್(ಗ್ರೇಟರ್ ನೋಯ್ಡಾ)ನ ಬಿಡ್ಡಿಂಗ್ ಪ್ರಕ್ರಿಯೆಯೂ ಇದೇ ಮಾದರಿಯಲ್ಲಿ ನಡೆದಿತ್ತು.
ಯಾವ ಏರ್ಪೋರ್ಟ್ನಲ್ಲಿ ಯಾವುದು ವಿಲೀನ?
1. ತಿರುಚ್ಚಿ ವಿಮಾನ ನಿಲ್ದಾಣದೊಂದಿಗೆ ಹುಬ್ಬಳ್ಳಿ
2. ವಾರಾಣಸಿಯೊಂದಿಗೆ ಕುಶಿನಗರ ಮತ್ತು ಗಯಾ
3. ಭುವನೇಶ್ವರದೊಂದಿಗೆ ತಿರುಪತಿ
4. ರಾಯ್ಪುರದೊಂದಿಗೆ ಔರಂಗಾಬಾದ್
5. ಇಂದೋರ್ನೊಂದಿಗೆ ಜಬಲ್ಪುರ
6. ಅಮೃತಸರದೊಂದಿಗೆ ಕಾಂಗ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ