ತಿರುಪತಿಯಲ್ಲಿ ವೈಕುಂಠ ಏಕಾದಶಿ
Team Udayavani, Dec 19, 2018, 10:16 AM IST
ತಿರುಮಲ: ವೈಕುಂಠ ಏಕಾದಶಿ ಪ್ರಯುಕ್ತ ತಿರುಮಲದಲ್ಲಿ ಲಕ್ಷಾಂತರ ಭಕ್ತರ ಸಮೂಹ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು. ಮಂಗಳವಾರ ಮುಂಜಾನೆ 4.20ಕ್ಕೆ ವೈಕುಂಠದ ಬಾಗಿಲಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೆ ಗೋವಿಂದನ ನಾಮ ಸ್ಮರಣೆಗಳೊಂದಿಗೆ ದರ್ಶನ ಪಡೆದ ಭಕ್ತರು ಹರ್ಷ ವ್ಯಕ್ತಪಡಿ ಸಿದರು. ಮಂಗಳವಾರ ಒಂದೇ ದಿನ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ವೆಂಕ ಟೇಶ್ವರನ ದರ್ಶನ ಪಡೆದಿದ್ದಾರೆ. ವೈಕುಂಠ ಕ್ಯೂ ಕಾಂಪ್ಲೆಕ್ಸ್ ಸೇರಿದಂತೆ ತಿರುಮಲದಲ್ಲಿ ದರ್ಶನ ಕ್ಕಾಗಿ ಇನ್ನೂ ಒಂದು ಲಕ್ಷ ಮಂದಿ ಕಾಯುತ್ತಿದ್ದು, ಬುಧವಾರ ಮುಂಜಾನೆ ವೇಳೆಗೆ ಎಲ್ಲರಿಗೂ ದರ್ಶನ ಭಾಗ್ಯ ಸಿಗಲಿದೆ ಟಿಟಿಡಿ ಮಂಡಳಿ ತಿಳಿಸಿದೆ.
ವೈಕುಂಠ ಏಕಾದಶಿ ಪ್ರಯುಕ್ತ ಮಂಡಳಿ ಅಧ್ಯಕ್ಷ ಪುಟಾ ಸುಧಾಕರ ಯಾದವ್, ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಗಾಲ್, ಜಂಟಿ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್. ಶ್ರೀನಿವಾಸರಾಜು ಅವರು ಖುದ್ದು ತಿರುಮಲದಲ್ಲಿ ಹಾಜರಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಜವಾಬ್ದಾರಿ ಹೊತ್ತಿದ್ದರು.
ಅವರು ಭಕ್ತರನ್ನು ಸಂಪರ್ಕಿಸಿ ಯಾವುದೇ ತೊಂದರೆ ಇಲ್ಲದಂತೆ ದರ್ಶನಕ್ಕೆ ಅವಕಾಶ ಮಾಡಿ ಕೊಟ್ಟರು. ಭಕ್ತರಿಗೆ ದರ್ಶನ ವಿಳಂಬವಾದ ಹಿನ್ನೆಲೆ ಮಂಡಳಿ ವತಿಯಿಂದ ಊಟ ತಿಂಡಿ, ವೈದ್ಯಕೀಯ ಸೌಲಭ್ಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡ ಲಾಗಿತ್ತು. ಇಡೀ ತಿರುಮಲ ಜಾತ್ರೆ ಹಾಗೂ ಹಬ್ಬದಂತೆ ಸಿಂಗಾರಗೊಂಡಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಳ ಗೊಂಡಂತೆ ದೇಶದ ಪ್ರಮುಖ ರಾಜಕಾರಣಿ ಗಳು, ಗಣ್ಯರು, ಲಕ್ಷೋಪಾದಿಯಲ್ಲಿ ಭಕ್ತರು ಭಾಗಹಿಸಿದ್ದರು ಎಂದು ಟಿಟಿಡಿ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್
ಛತ್ತೀಸ್ಗಢದ ಕಂಕೇರ್ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ
Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು
Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್ ಮುಳುಗಡೆ; ಹಲವರು ನಾಪತ್ತೆ
Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ನಾರಾಯಣ್,ಬಟ್ಲರ್ ಶತಕ ಮೇಲಾಟ; ರನ್ ಚೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಬೃಹತ್ ಗೆಲುವು
ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್
FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್
ಹೃದಯ ಗೆದ್ದ ದಿನೇಶ್ ಕಾರ್ತಿಕ್; ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ?
IPL ಬ್ರೇಕ್ ಪಡೆದ ಗ್ಲೆನ್ ಮ್ಯಾಕ್ಸ್ವೆಲ್